DistrictsPolitics

ವರುಣಾದಲ್ಲಿ ವಿಜಯೇಂದ್ರ ಅಬ್ಬರ; ಸೋಮಣ್ಣ ಗೆಲ್ಲಿಸಲು ಪಣ ತೊಟ್ಟರಾ ಮಾಜಿ ಸಿಎಂ ಪುತ್ರ..?

ಮೈಸೂರು; ಬಿಎಸ್‌ವೈ ಪುತ್ರ ವಿಜಯೇಂದ್ರ ಸಣ್ಣ ವಯಸ್ಸಾದರೂ ಪಕ್ಷವನ್ನು ಗೆಲ್ಲಿಸಿಕೊಂಡು ಬರುವಷ್ಟು ರಾಜಕೀಯ ತಂತ್ರಗಾರಿಕೆ ಅವರಿಗೆ ಗೊತ್ತಿದೆ. ಉಪಚುನಾವಣೆಗಳಲ್ಲಿ ಅದನ್ನು ಸಾಬೀತು ಕೂಡಾ ಮಾಡಿದ್ದಾರೆ. ಹೀಗಾಗಿ ಅವರು ಎಂಟ್ರಿ ಕೊಡುತ್ತಾರೆ ಅಂದ್ರೆ ಕುತೂಹಲ ಅಂತೂ ಹೆಚ್ಚಾಗುತ್ತೆ. ಈ ಕಾರಣಕ್ಕಾಗಿಯೇ ವರುಣಾ ಕ್ಷೇತ್ರದಲ್ಲಿ ಕೂಡಾ ಇವತ್ತು ಚುನಾವಣಾ ಅಖಾಡ ರಂಗೇರಿದೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ವರ್ಚಸ್ಸಿದೆ. ಅವರೇ ವರುಣಾದಲ್ಲಿ ಸ್ಪರ್ಧೆ ಮಾಡಬೇಕೆಂದು ಹಲವರು ಒತ್ತಾಯ ಮಾಡುತ್ತಿದ್ದರು. ಆದ್ರೆ ವಿಜಯೇಂದ್ರ ಶಿಕಾರಿಪುರಕ್ಕೆ ಫಿಕ್ಸ್‌ ಆಗಿದ್ದಾರೆ. ಆದ್ರೆ, ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಪರವಾಗಿ ವಿಜಯೇಂದ್ರ ಪ್ರಚಾರ ಕಣಕ್ಕಿಳಿದಿದ್ದಾರೆ.

ಇಂದು ಮಧ್ಯಾಹ್ನ ವಿಜಯೇಂದ್ರ ಅವರು ವರುಣಾ ಕ್ಷೇತ್ರಕ್ಕೆ ಬರಲಿದ್ದಾರೆ. ಸೋಮಣ್ಣ ಪರವಾಗಿ ವಿಜಯೇಂದ್ರ ಅವರು ಭರ್ಜರಿ ಪ್ರಚಾರ ನಡೆಸಲಿದ್ದಾರೆ. ರೋಡ್‌ ಶೋ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ಇದರಿಂದಾಗಿ, ಸೋಮಣ್ಣ ಮುಖದಲ್ಲಿ ಕೂಡಾ ಕಳೆ ಬಂದಿದೆ.

Share Post