CrimeDistricts

ಕಬ್ಬಾಳು ದೇವಾಲಯದಲ್ಲಿ ಭಕ್ತನ ತಲೆಬುರುಡೆ ಒಡೆದ ಸೆಕ್ಯೂರಿಟಿ ಗಾರ್ಡ್‌!

ರಾಮನಗರ; ದೇವಾಲಯದ ಸೆಕ್ಯೂರಿಟಿ ಗಾರ್ಡ್‌ ಒಬ್ಬ ಭಕ್ತನಿಗೆ ಬೀಗದ ಕೀನಿಂದ ಹೊಡೆದಿದ್ದು, ಭಕ್ತನ ತಲೆಬುರುಡೆ ಒಡೆದ ಘಟನೆ ನಡೆದಿದೆ.. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ದೇವಾಲಯದಲ್ಲಿ ಈ ಘಟನೆ ನಡೆದಿದೆ..

ಭಕ್ತರೊಬ್ಬರು ವಿಐಪಿ ಗೇಟ್‌ನಲ್ಲಿ ಬಂದಿದ್ದರಿಂದ ಆಕ್ರೋಶಗೊಂಡ ಸೆಕ್ಯೂರಿಟಿ ಗಾರ್ಡ್‌ ಬೀಗದ ಕೀನಿಂದ ತಲೆಗೆ ಒಡೆದಿದ್ದಾನೆ.. ಇದರಿಂದಾಗಿ ಭಕ್ತ ಮಹೇಶ್‌ ತಲೆಯಿಂದ ರಕ್ತ ಚಿಮ್ಮಿದ್ದು, ಭಕ್ತ ಸಂಬಂಧಿಕರು, ಇತರೆ ಭಕ್ತರು ಸೆಕ್ಯುರಿಟಿ ಗಾರ್ಡ್‌ ನಾಗರಾಜ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ಇನ್ನು ಗಾಯಾಳು ಭಕ್ತ ಮಹೇಶ್‌, ನನಗೆ ನ್ಯಾಯ ಸಿಗಬೇಕು, ಸೆಕ್ಯೂರಿಟಿ ಗಾರ್ಡ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ದೇವಸ್ಥಾನದ ಒಳಗೇ ಧರಣಿ ಕುಳಿತಿದ್ದಾರೆ..

ಸ್ಥಳಕ್ಕೆ ದೇವಾಲಯದ ಆಡಳಿತ ಮಂಡಳಿ, ಎಕ್ಸಿಕ್ಯೂಟಿವ್‌ ಆಫೀಸರ್‌ ಭೇಟಿ ನೀಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.. ಇಬ್ಬರ ನಡುವೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ..

 

Share Post