DistrictsPolitics

ಸುನಾಮಿಯ ಗೇಟ್‌ ತೆರೆದಿದೆ ಅದ್ರಲ್ಲಿ ಎಲ್ಲಾ ಕೊಚ್ಚಿಹೋಗ್ತಾರೆ; ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ; ಸುನಾಮಿಯ ಗೇಟ್‌ ತೆರೆದಿದೆ. ಅದ್ರಲ್ಲಿ ಎಲ್ಲಾ ಕೊಚ್ಚಿಹೋಗ್ತಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನನ್ನು ಸೋಲಿಸಬೇಕೆಂದು ಕೆಲವರು ಪ್ರಯತ್ನಪಡುತ್ತಿದ್ದಾರೆ. ಆದ್ರೆ ಅವರೇ ಈ ಚುನಾವಣೆ ನಂತರ ಕೊಚ್ಚಿಹೋಗುತತಾರೆ ಎಂದು ಹೇಳಿದ್ದಾರೆ.

ಈ ನಾನು ಈ ಬಾರಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇನೆ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದಿರುವ ಜಗದೀಶ್‌ ಶೆಟ್ಟರ್‌, ಈ ಬಾರಿ ನಾನು ಗೆದ್ದು ಶಾಸಕನಾದರೆ, 24X7 ಕುಡಿಯುವ ನೀರಿನ ಯೋಜನೆ ಜಾರಿ‌ ಮಾಡುತ್ತೇನೆ ಎಂದು ಹೇಳಿದ್ದಾರೆ. ಕೆಲವರು ನಾನು ಸೋಲಬೇಕು ಎಂದು ಕನಸು ಕಾಣುತ್ತಿದ್ದಾರೆ. ಆದ್ರೆ ಅದು ನಡೆಯೋದಿಲ್ಲ. ಸುನಾಮಿ ಗೇಟ್‌ ತೆರೆದಿದೆ. ಅದನ್ನು ತಡೆದುಕೊಳ್ಳುವ ಶಕ್ತಿ ಬಿಜೆಪಿಗಿಲ್ಲ ಎಂದು ಹೇಳಿದ್ದಾರೆ.

ಇನ್ನು ವಿಜಯಸಂಕೇಶ್ವರ್‌ ಹೇಳಿಕೆ ಬಗ್ಗೆ ಮಾತನಾಡಿರುವ ಶೆಟ್ಟರ್‌, ವಿಜಯ ಸಂಕೇಶ್ವರ್‌ ಅವರು ಬೇರೆ ಬೇರೆ ಒತ್ತಡದಿಂದಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದಿದ್ದಾರೆ.

Share Post