DistrictsPolitics

ಕಾಂಗ್ರೆಸ್‌ ಸುಳ್ಳಿನ ಸರಮಾಲೆ ಪೋಣಿಸುತ್ತಿದೆ; ಸಿಎಂ ಬೊಮ್ಮಾಯಿ

ಅಫಜಲಪುರ; ಕಾಂಗ್ರೆಸ್‌ ಸುಳ್ಳಿನ ಸರಮಾಲೆಯನ್ನೇ ಪೋಣಿಸುತ್ತಿದೆ. ಆದ್ರೆ ಚುನಾವಣೆಯಲ್ಲಿ ಅವರ ಆಟ ನಡೆಯೋದಿಲ್ಲ. ಬಿಜೆಪಿ ಗೆಲುವು ಪಕ್ಕಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್‌ ಪರವಾಗಿ ಪ್ರಚಾರದ ನಡೆಸಿ ಮಾತನಾಡಿದರು.

ಕಾಂಗ್ರೆಸ್‌ನವರು ಎಲ್ಲಾ ಸುಳ್ಳನ್ನೇ ಹೇಳುತ್ತಾರೆ. ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಆದ್ರೆ ನಾವು ನಮ್ಮ ಸರ್ಕಾರದ ರಿಪೋರ್ಟ್‌ ಕಾರ್ಡ್‌ನ್ನು ಜನರ ಮುಂದಿಡುತ್ತೇನೆ. ನಾವು ಏನೇನು ಕೆಲಸ ಮಾಡಿದ್ದೇವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ. ಆ ಮೂಲಕ ಮತಯಾಚನೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Share Post