DistrictsPolitics

ಇಂಡಿಯಾ ಒಕ್ಕೂಟದಿಂದಾಗಿ ಬಿಜೆಪಿಗೆ ಭಯ ಬಂದಿದೆ; ಡಿ.ಕೆ.ಶಿವಕುಮಾರ್‌

ರಾಮನಗರ; ಇಂಡಿಯಾ ಒಕ್ಕೂಟದಿಂದಾಗಿ ಬಿಜೆಪಿಗೆ ಭಯ ಬಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕನಕಪುರದಲ್ಲಿ ಮಾತನಾಡಿರುವ ಅವರು, ಇಂಡಿಯಾ ಹೆಸರನ್ನು ಬದಲಿಸಿ ಭಾರತ್‌ ಎಂದು ಮರುನಾಮಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಮಾಡ್ತಿರೋದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್‌, ನಮ್ಮ ಒಕ್ಕೂಟದ ಹೆಸರು ಅವರಿಗೆ ಎಫೆಕ್ಟ್‌ ಆಗಿದೆ. ಅದಕ್ಕೆ ದೇಶದ ಹೆಸರು ಬದಲಿಸಲು ಹೊರಟಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಇದನ್ನು ಖಂಡಿಸುತ್ತೇನೆ. ನಾವು ಭಾರತೀಯರೇ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

Share Post