CrimeDistricts

ನಾನೂ ಕಾಂಗ್ರೆಸ್‌ ಕಾರ್ಯಕರ್ತ; ಸಿದ್ದು ಕಾರಿಗೆ ಮೊಟ್ಟೆ ಹೊಡೆದ ಸಂಪತ್‌ ಹೇಳಿಕೆ

ಮಡಿಕೇರಿ; ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವ್ಯಕ್ತಿ ನಾನೂ ಕೂಡಾ ಕಾಂಗ್ರೆಸ್‌ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಹೇಳಿಕೆಗೆ ಬೇಸತ್ತು ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ ಎಂದು ಸೋಮವಾರಪೇಟೆಯ ಸಂಪತ್ ಎಂಬುವವರು ಹೇಳಿರುವ ವಿಡಿಯೊ ವೈರಲ್ ಆಗಿದೆ.

ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದರಿಂದಾಗಿ ನಾನು ಕೋಪಗೊಂಡಿದ್ದೆ. ಕೆಲಸದ ನಿಮಿತ್ತ ಬಂದಿದ್ದ ನಾನು ಪ್ರತಿಭಟನೆಯ ಗುಂಪಿನಲ್ಲಿ ಸೇರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ ಎಂದು ಸಂಪತ್ ಹೇಳಿಕೊಂಡಿದ್ದಾರೆ. ನಾನು ಜೀವಿಜಯ ಅವರ ಹಿಂಬಾಲಕ. ಅವರು ಜೆಡಿಎಸ್‌ನಲ್ಲಿದ್ದಾಗ ಮೊದಲು ನಾನೂ ಅಲ್ಲೇ ಇದ್ದೆ. ಅವರು ಕಾಂಗ್ರೆಸ್‌ಗೆ ಬಂದಾಗ ನಾನೂ ಅವರೊಂದಿಗೆ ಬಂದೆ. ಸಿದ್ದರಾಮಯ್ಯ ಅವರು ಟಿಪ್ಪು ಕುರಿತು ನೀಡಿದ ಹೇಳಿಕೆಯಿಂದ ನನಗೆ ಬೇಸರವಾಗಿತ್ತು ಎಂದೂ ಸಂಪತ್‌ ಹೇಳಿದ್ದಾರೆ.

Share Post