Districts

ಕಬ್ಬಿನ ಟ್ರಾಕ್ಟರ್‌ಗೆ ಬೆಂಕಿ – ಜಮಖಂಡಿಯಲ್ಲಿ ಅವಘಡ

ಬಾಗಲಕೋಟೆ : ಚಲಿಸುವ ಟ್ರಾಕ್ಟರ್‌ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ. ಕಬ್ಬನ್ನು ಹೊತ್ತು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಬೆಂಕಿ ಹಚ್ಚಿಕೊಂಡಿದೆ. ಘಟನೆಯನ್ನು ಜಮಖಂಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ

ಸಮೀಪದಲ್ಲಿದ್ದ ಪ್ರಭುಲಿಂಗೇಶ್ವರ ಕಾರ್ಖಾನೆಗೆ ಕಬ್ಬು ಸಾಗಿಸಲು ತೆರಳುತ್ತಿದ್ದ ಟ್ರಾಕ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ವಿದ್ಯುತ್‌ ತಂತಿ ಸ್ಪರ್ಷದಿಂದ ಈ ಅವಘಡ ಸಂಭವಿಸಿದೆ. ಟ್ರಾಕ್ಟರ್‌ನಲ್ಲಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ, ಆದರೆ ಬೇರೆ ಯಾವ ಅನಾಹುತವೂ ಸಂಭವಿಸಿಲ್ಲ. ಡಬಲ್‌ ಟ್ರೈಲರ್‌ ನಲ್ಲಿ ಲೋಡ್‌ ಹಾಕಿಕೊಂಡಿದ್ದ ಕಾರಣ ಸಾಕಷ್ಟು ಕಬ್ಬು ನಷ್ಟವಾಗಿದೆ.

ಸ್ಥಳೀಯರ ಸಮಯಪ್ರಜ್ಞೆಯಿಂದ ಟ್ರಾಕ್ಟರ್‌ ಅನ್ನು ಬಸವೇಶ್ವರ ವೃತ್ತದಲ್ಲಿ ನಿಲ್ಲಿಸಿದ್ದಾರೆ. ನಂತರ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

 

Share Post