CrimeDistricts

ಮನೆ ವಿಚಾರದಲ್ಲಿ ತಂದೆ-ಮಗನ ಜಗಳ; ಮಗನಿಂದಲೇ ತಂದೆಯ ಹತ್ಯೆ

ದಾವಣಗೆರೆ; ಇಲ್ಲಿನ ಚೆನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದುಹೋಗಿದೆ. ದುಷ್ಟ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಕತ್ತಲಗೆರೆ ಗ್ರಾಮದ ಎಸ್‌.ಆರ್‌ ಕ್ಯಾಂಪ್‌ನಲ್ಲಿ ಈ ದುರ್ಘಟನೆ ನಡೆದಿದೆ. ಅರವತ್ತು ವರ್ಷದ ಮಂಜುನಾಥ್‌ ಕೊಲೆಯಾಗಿದ್ದು, ಆರೋಪಿ ಮಗ ಇಪ್ಪತ್ತು ವರ್ಷದ ತಿಪ್ಪೇಶ್‌ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

   ಆಸ್ತಿ, ಮನೆ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಅದು ತಾರಕಕ್ಕೇರಿದ್ದು, ರೊಚ್ಚಿಗೆದ್ದ ಮಗ ತಿಪ್ಪೇಶ್‌ ತನ್ನ ತಂದೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ನಡೆಯುತ್ತಿದೆ.

Share Post