DistrictsNational

ಕರ್ನಾಟಕದ ಕಾರುಗಳ ಮೇಲೆ ಕಲ್ಲು ತೂರಿದ ಶಿವಸೇನೆ ಪುಂಡರು

ಬೆಳಗಾವಿ : ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅವಮಾನ ಮಾಡಿರುವ ಕಾರಣ ಶಿವಸೇನೆಯ ಕೆಲ ಕಿಡಿಗೇಡಿಗಳು ಕರ್ನಾಟಕದವರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ ಪಟ್ಟಣದಲ್ಲಿ ಕೆಲ ಶಿವಸೇನೆ ಹುಡುಗರು ಕರ್ನಾಟಕದ ಖಾಸಗಿ ವಾಹನಗಳು ಮತ್ತು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಮಹಾರಾಷ್ಟ್ರಕ್ಕೆ ಹೋಗುತ್ತಿರುವ ಕರ್ನಾಟಕ ನಂಬರ್‌ ಪ್ಲೇಟ್‌ ಇರುವ ಗಾಡಿಗಳನ್ನು ನಿಲ್ಲಿಸಿ, ಕಲ್ಲು ತೂರಾಟ ಮಾಡುವುದರ ಜೊತೆಗೆ, ಗಾಡಿಯ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆಯುತ್ತಿದ್ದಾರೆ. ಪೊಲೀಸರ ಎದುರೇ ಈ ದೌರ್ಜನ್ಯ ನಡೆದಿದೆ.

 

Share Post