Districts

ಶಕ್ತಿಧಾಮದ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ

ಮೈಸೂರು; ಮೈಸೂರಿನ ಶಕ್ತಿಧಾಮದ ಮಕ್ಕಳೊಡನೆ ನಟ ಶಿವರಾಜ್‌ ಕುಮಾರ್‌ ದಂಪತಿ ಗಣರಾಜ್ಯೋತ್ಸವ ಆಚರಣೆ ಮಾಡಿದರು. ಇದೇ ವೇಳೆ ಶಿವರಾಜ್‌ಕುಮಾರ್‌ ಅವರು ಕನ್ನಡದ ಹಾಡು ಹಾಡಿ ಮಕ್ಕಳನ್ನು ರಂಜಿಸಿದರು.

ಧ್ವಜಾರೋಹಣ ನೇರವೇರಿಸಿದ ಶಿವರಾಜ್ ಕುಮಾರ್, ಶಕ್ತಿಧಾಮದ ಮಕ್ಕಳ ಪಥ ಸಂಚಲನ ,ಹಾಗೂ ನಿರೂಪಣೆಗೆ  ಮೆಚ್ಚುಗೆ ವ್ಯಕ್ತಪಡಿಸಿದರು. ಶಕ್ತಿದಾಮದ ಮಕ್ಕಳ ಜ್ಞಾನದ ಮಟ್ಟ ಉತ್ತಮವಾಗಿದೆ.  ಶಕ್ತಿಧಾಮ ಟ್ರಸ್ಟಿಗಳು ಉತ್ತಮವಾದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶಿವಣ್ಣ ಹೇಳಿದರು.

 

Share Post