Districts

ಶಾಲಾ ಪಠ್ಯದಲ್ಲಿ ಶಿವಕುಮಾರ ಶ್ರೀಗಳ ಜೀವನ ಚರಿತ್ರೆ ಅಳವಡಿಸಿ; ಸರ್ಕಾರಕ್ಕೆ ಬಿಎಸ್‌ವೈ ಮನವಿ

ತುಮಕೂರು: ಪಠ್ಯ ಪುಸ್ತಕದಲ್ಲಿ ಶಿವಕುಮಾರಶ್ರೀಗಳ ಜೀವನ ಚರಿತ್ರೆ ಅಳವಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀ 115ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಕುಮಾರ ಶ್ರೀಗಳು ಬಸವಣ್ಣನವರಷ್ಟೇ ಹೆಸರು ಮಾಡಿದ್ದರು ಎಂದು ಹೇಳಿದರು.

ವಿಶ್ವವನ್ನೇ ಬೆರಗುಗೊಳಿಸಿದ ಬಸವಣ್ಣರ ತತ್ವಗಳನ್ನು ಸಾಕಾರಗೊಳಿಸಿದವರು ಶಿವಕುಮಾರ ಶ್ರೀಗಳು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಣ್ಣಿಸಿದರು. ವಿಶ್ವಕ್ಕೆ ಶಾಂತಿ, ಸೌಹಾರ್ದತೆ, ಸಾಮರಸ್ಯದ ಸಂಕೇತವನ್ನು ತಮ್ಮ ನಡೆಯಿಂದ ತೋರಿಸಿಕೊಟ್ಟವರು ಶಿವಕುಮಾರ ಶ್ರೀಗಳು. ಸಿದ್ದಲಿಂಗ ಸ್ವಾಮಿಗಳು ಕೂಡಾ ಶಿವಕುಮಾರ ಶ್ರೀ ತೋರಿದ ದಾರಿಯಲ್ಲೇ ನಡೆದುಕೊಂಡು ಬರುತ್ತಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳಿದರು.

Share Post