DistrictsPolitics

ಶೆಟ್ಟರ್‌ ಗೆದ್ದೇ ಗೆಲ್ತಾರೆ; ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

ಹುಬ್ಬಳ್ಳಿ; ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ಯಾವ ಕಾರಣಕ್ಕೂ ಗೆಲ್ಲೋದಿಲ್ಲ. ಈ ಬಗ್ಗೆ ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕೆ ತಿರುಗೇಟು ಎಂಬಂತೆ ಜಗದೀಶ್‌ ಶೆಟ್ಟರ್‌ ಅಭಿಮಾನಿಯೊಬ್ಬರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ನೂರಕ್ಕೆ ನೂರು ಪರ್ಸೆಂಟ್‌ ನಮ್ಮ ಜಗದೀಶ್‌ ಶೆಟ್ಟರ್‌ ಗೆಲ್ಲುತ್ತಾರೆ ಎಂದು ಶೆಟ್ಟರ್‌ ಅಭಿಮಾನಿ ಮಂಜುನಾಥ್‌ ಎಂಬುವವರು ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿಯ ಕಾಂಗ್ರೆಸ್‌ ಕಾರ್ಯಕರ್ತ ಮಂಜುನಾಥ್‌ ಎನ್‌. ಎಂಬುವವರೇ ರಕ್ತದಲ್ಲಿ ಪತ್ರ ಬರೆದವರು. ಈ ಮೂಲಕ ಅವರು ಜಗದೀಶ್‌ ಶೆಟ್ಟರ್‌ ಮೇಲಿರುವ ಅಭಿಮಾನವನ್ನು ಮೆರೆದಿದ್ದಾರೆ. ಶೆಟ್ಟರ್‌ ಗೆಲ್ಲೋದು ನೂರಕ್ಕೆ ನೂರರಷ್ಟು ಸತ್ಯ. ಇದರಲ್ಲಿ ಅನುಮಾನವೇ ಇಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುತ್ತದೆ. ಜೈ ಕಾಂಗ್ರೆಸ್‌ ಎಂದು ಮಂಜುನಾಥ್‌ ರಕ್ತದಲ್ಲಿ ಬರೆದು ಪ್ರದರ್ಶಿಸಿದ್ದಾರೆ.

Share Post