CrimeDistricts

ಶಬರಿಮಲೆ ಭಕ್ತರಿದ್ದ ಬಸ್‌ ಅಪಘಾತʼ 17 ಜನರಿಗೆ ಗಾಯ, ಇಬ್ಬರು ಗಂಭೀರ

ಕೋಲಾರ; ಕೋಲಾರದ ಬಳಿ ಅಯ್ಯಪ್ಪಸ್ವಾಮಿ ಭಕ್ತರಿದ್ದ ಬಸ್‌ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿದ್ದ 50 ಮಂದಿ ಅಯ್ಯಪ್ಪ ಭಕ್ತರಿದ್ದು, ಶಬರಿಮಲೆಗೆ ಹೊರಟಿದ್ದರು. ಆದ್ರೆ  ಬಸ್‌ ಮಧ್ಯದಲ್ಲೇ ಅಪಘಾತಕ್ಕೀಡಾಗಿದ್ದು, 17 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮಳಬಾಗಿಲು ತಾಲ್ಲೂಕಿನ ತಮ್ಮರೆಡ್ಡಿಹಳ್ಳಿ ಬಂಗವಾದಿ, ಮಜರಾ ಕಿತ್ತೂರು ಗ್ರಾಮದಿಂದ 70 ಭಕ್ತರು ಶಬರಿ ಮಲೆಗೆ ಹೊರಟಿದ್ದರು. ವಿನಾಯಕ ಹೆಸರಿನ ಖಾಸಗಿ ಬಸ್‌ ಹಾಗೂ ಟೆಂಪೋಟ್ರಾವೆಲರ್‌ ಮೂಲಕ ಪ್ರಯಾಣ ಬೆಳೆಸಿದ್ದರು. ಆದ್ರೆ ಬಸ್‌ ಅಪಘಾತಕ್ಕೀಡಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

 

Share Post