CrimeDistricts

ಮಕ್ಕಳಿಗೆ ಹುಚ್ಚು ನಾಯಿ ಕಡಿತ; ಇಬ್ಬರು ಮಕ್ಕಳ ಸಾವು

ಬಳ್ಳಾರಿ; ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿರತೆ ಹಾವಳಿಯಿಂದ ಜನ ಪರದಾಡುತ್ತಿದ್ದಾರೆ. ಇತ್ತ ಬಳ್ಳಾರಿಯಲ್ಲಿ ನಾಯಿಗಳ ಕಾಟದಿಂದ ಮಕ್ಕಳು ಬಲಿಯಾಗುತ್ತಿದ್ದಾರೆ. ಬೀದಿ ಬದಿಯಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ್ದು, ಅವರಿಗೆ ಸರಿಯಾದ ಚಿಕಿತ್ಸೆ ಸಿಗದೇ ಇಬ್ಬರೂ ಮಕ್ಕಳು ಸಾವನ್ನಪ್ಪಿದ್ದಾರೆ. ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಇಬ್ಬರಿಗೂ ಹುಚ್ಚು ನಾಯಿ ಕಡಿದಿದೆ ಎಂದು ತಿಳಿದುಬಂದಿದ.

ಸುರಕ್ಷಿತಾ ಹಾಗೂ ಶಾಂತಕುಮಾರ್‌ ನಾಯಿ ದಾಳಿಗೆ ಬಲಿಯಾದ ಮಕ್ಕಳು. ಇಬ್ಬರೂ ಬೇರೆ ಬೇರೆ ಕಡೆ ಆಟ ಆಡುತ್ತಿದ್ದರು. ಈ ವೇಳೆ ನಾಯಿ ಕಚ್ಚಿ ಗಾಯಗೊಳಿಸಿದೆ. ಒಬ್ಬರು ಬಳ್ಳಾರಿಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮತ್ತೊಬ್ಬ ಬಾಲಕಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

 

Share Post