CrimeDistricts

ಪ್ರವೀಣ್‌ ಹತ್ಯೆ ಕೇಸ್‌; ಬೆಳ್ಳಾರೆಯಲ್ಲಿ ಕಲ್ಲು ತೂರಾಟ – ಲಾಠಿ ಚಾರ್ಜ್‌

ಬೆಳ್ಳಾರೆ; ಹಿಂದೂ ಸಂಘಟನೆ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬೆಳ್ಳಾರೆ ಉದ್ವಿಗ್ನಗೊಂಡಿದೆ. ಪ್ರವೀಣ್‌ ಅಂತಿಮ ದರ್ಶನಕ್ಕೆ ಸಾವಿರಾರು ಜನ ಬಂದಿದ್ದು, ಪಾರ್ಥಿವ ಶರೀರದ ಮೆರವಣಿಗೆ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದರು. ಇದೇ ವೇಳೆ ವ್ಯಕ್ತಿಯೊಬ್ಬರ ತಲೆಗೆ ಗಾಯವಾಗಿದೆ. ಇನ್ನೊಬ್ಬರು ಕುಸಿದುಬಿದ್ದಿದ್ದಾರೆ.

ಪ್ರವೀಣ್‌ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಕ್ಕಾಗಿ ಸಚಿವ ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ಈ ವೇಳೆ ಸೇರಿದ್ದ ಜನ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ನಳಿನ್‌ ಕುಮಾರ್‌ ಕಟೀಲ್‌ ಅವರ ಕಾರನ್ನು ಉರುಳಿಸಲು ಕೂಡಾ ಯತ್ನಿಸಲಾಯಿತು. ಕಾರಿನ ಟೈರ್‌ನ ಗಾಳಿ ಬಿಡಲಾಯಿತು.

Share Post