CrimeDistricts

ಪ್ರವೀಣ್‌ ಹತ್ಯೆ ಕೇಸ್‌; 40 ನಿಮಿಷ ಕಾದಿದ್ದ ದುಷ್ಕರ್ಮಿಗಳು – ಸಿಸಿಟಿವಿಯಲ್ಲಿ ಸೆರೆ

ಮಂಗಳೂರು; ಬೆಳ್ಳಾರೆಯಲ್ಲಿ ಕೊಲೆಯಾದ ಹಿಂದೂಪರ ಮುಖಂಡ ಪ್ರವೀಣ್‌ ಹತ್ಯೆಗೂ ಮುನ್ನ ದುಷ್ಕರ್ಮಿಗಳು ನಲವತ್ತು ನಿಮಿಷಕ್ಕೂ ಹೆಚ್ಚು ಕಾಲ ಕಾದಿದ್ದರು ಎಂಬ ಅನುಮಾನ ಮೂಡುತ್ತಿದೆ. ಪ್ರವೀಣ್‌ ಅವರ ಚಿಕನ್‌ ಅಂಗಡಿಯಿಂದ ಐವತ್ತು ಮೀಟರ್‌ ದೂರದಲ್ಲಿ ಬೈಕ್‌ ಒಂದು ನಲವತ್ತು ನಿಮಿಷಕ್ಕೂ ಹೆಚ್ಚು ಕಾಲ ನಿಂತಿತ್ತು. ಆ ಬೈಕ್‌ ಮೇಲೆ ಒಬ್ಬ ವ್ಯಕ್ತಿ ಕೂತಿದ್ದ. ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಪ್ರವೀಣ್‌ ಅಂಗಡಿ ಮುಂದೆ ಓಡಾಡಿದ್ದಾರೆ. ಇದು ರಾತ್ರಿ ೮ ಗಂಟೆಯಿಂದ ೮.೩೦ರ ಸುಮಾರಿಗೆ ನಡೆದಿವೆ. ಅನಂತರವೇ ಪ್ರವೀಣ್‌ ಕೊಲೆಯಾಗಿದೆ ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಾವಳಿ ಈ ಅನುಮಾನಾಸ್ಪದ ಬೈಕ್‌ ಹಾಗೂ ವ್ಯಕ್ತಗಳ ಚಲನವಲನ ಸೆರೆಯಾಗಿದೆ. ಅಷ್ಟುಹೊತ್ತು ಆ ಬೈಕ್‌ ಏಕೆ ನಿಂತಿತ್ತು…? ದುಷ್ಕರ್ಮಿಗಳು ಕಾದು ಕಾದು ಪ್ರವೀಣ್‌ ಅವರನ್ನು ಹತ್ಯೆ ಮಾಡಿದರಾ..? ಆ ಬೈಕ್‌ ಯಾರದ್ದು..? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Post