DistrictsPolitics

ಮೊಟ್ಟೆ ಎಸೆಯುವುದು ನಾನು ಸಮರ್ಥಿಸಲ್ಲ; ಪ್ರಲ್ಹಾದ್‌ ಜೋಶಿ

ಧಾರವಾಡ; ಮೊಟ್ಟೆ ಎಸೆಯುವುದು, ಕಪ್ಪು ಬಾವುಟ ಪ್ರದರ್ಶಿಸುವುದನ್ನು ನಾನು ಸಮರ್ಥಿಸುವುದಿಲ್ಲ. ಸಿದ್ದರಾಮಯ್ಯ ಆಗಲಿ, ಬೇರೆ ಯಾರಿಗೇ ಆಗಲಿ ಮೊಟ್ಟೆ ಎಸೆಯೋದು ತಪ್ಪು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

  ಧಾರವಾಡದಲ್ಲಿ ಮಾತನಾಡಿದ ಅವರು, ಸ್ವತಃ ಇಂದಿರಾ ಗಾಂಧಿಯವರು ಸಾವರ್ಕರ್ ಬಗ್ಗೆ ಪತ್ರ ಬರೆದಿದ್ದರು. ಅವರು ಭಾರತದ ಸುಪುತ್ರ ಅಂತಾ ಹೊಗಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ದೊಡ್ಡದಿದೆ . ಇವರ ಬಗ್ಗೆ ಸಿದ್ದರಾಮಯ್ಯ ಮಾತನಾಡಬಾರದು. ಅದು ತಪ್ಪು. ಸಿದ್ದರಾಮಯ್ಯ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ಆದ್ರೆ, ಅವರ ವಿರುದ್ಧ ಪ್ರತಿಭಟನೆ ಮಾಡುವಾಗ ಮೊಟ್ಟೆ ಎಸೆಯವುದು ತಪ್ಪು ಎಂದು ಹೇಳಿದ್ದಾರೆ.

Share Post