DistrictsNational

ಪ್ರಧಾನಿ ಯೋಗಾ ಕಾರ್ಯಕ್ರಮ; ಪ್ರತಾಪ ಸಿಂಹ, ರಾಮದಾಸ್‌ಗೆ ಗೇಟ್‌ಪಾಸ್‌

ಮೈಸೂರು; ಜೂನ್‌ 21ರಂದು ಮೈಸೂರಿನಲ್ಲಿ ವಿಶ್ವಯೋಗಾ ದಿನದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಿಂದ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಹಾಗೂ ಸ್ಥಳೀಯ ಶಾಸಕ ಎಸ್‌.ಎ.ರಾಮದಾಸ್‌ಗೆ ಗೇಟ್‌ಪಾಸ್‌ ನೀಡಲಾಗಿದೆ. 

ಕಾರ್ಯಕ್ರಮ ನಡೆಯುವ ಸ್ಥಳ ಶಾಸಕ ಎಸ್‌.ಎ.ರಾಮದಾಸ್‌ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅವರೇ ವಹಿಸಬೇಕಿತ್ತು. ಆದ್ರೆ, ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ಎಸ್‌.ಎ.ರಾಮದಾಸ್‌ ಇಬ್ಬರ ನಡುವೆ ಮೈಲೇಜ್‌ ವಾರ್‌ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯ ಈ ಇಬ್ಬರಿಗೂ ಕಾರ್ಯಕ್ರಮದ ವೇದಿಕೆಯಿಂದ ಗೇಟ್‌ಪಾಸ್‌ ನೀಡಿದೆ ಎಂದು ತಿಳಿದುಬಂದಿದೆ.

ಇಬ್ಬರೂ ನಾಯಕರು ಕಾರ್ಯಕ್ರಮದ ಕ್ರೆಡಿಟ್‌ ಪಡೆಯಲು ಹಾದಿ ರಂಪ ಬೀದಿ ರಂಪ ಮಾಡಿದ್ದರಿಂದಾಗಿ ಮುಜುಗರ ತಪ್ಪಿಸಲು ಪ್ರಧಾನಿ ಕಾರ್ಯಾಲಯ ಈ ತೀರ್ಮಾನ ಮಾಡಿದೆ ಎಂದು ತಿಳಿದುಬಂದಿದೆ. ಕೇವಲ ಐದು ಮಂದಿಗೆ ಮಾತ್ರ ಪ್ರಧಾನಿ ಜೊತೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಆಯುಷ್ ಇಲಾಖೆ ಸಚಿವರಿಗೆ ಮಾತ್ರ ಅವಕಾಶ ನೀಡಲಾಗಿದೆ.

Share Post