Districts

ಕಾಂಗ್ರೆಸ್‌ ಸರ್ಕಾರದಲ್ಲೂ ಪರ್ಸಂಟೇಜ್‌ ವ್ಯವಹಾರ ಇತ್ತು; ಸಿ.ಎಂ.ಇಬ್ರಾಹಿಂ

ಕೋಲಾರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ಪರ್ಸಂಟೇಜ್‌ ವ್ಯವಹಾರ ನಡೆಯುತ್ತಿತ್ತು. ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಪರ್ಸಂಟೇಜ್‌ ವ್ಯವಹಾರ ಮಾಡ್ತಿದ್ರು. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಬಂದಿದ್ದೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ದೇವೇಗೌಡರಿಗೆ ರೈತರ ಬಗ್ಗೆ ಚಿಂತೆಯಾದರೆ, ಕಾಂಗ್ರೆಸ್‌ ನಾಯಕರಿಗೆ ಕುರ್ಚಿಯದ್ದೇ ಚಿಂತೆಯಾಗಿದೆ. ನಾಕಾ – ನೀಕಾ? ಎಂದು ಕಾಂಗ್ರೆಸ್‌ನ ಇಬ್ಬರು ನಾಯಕರು ಕಿತ್ತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಈ ಸಾಬ ಈಗ ಗೌಡರನ್ನು ಸೇರಿದ್ದಾನೆ. ಅದಕ್ಕೇ ಕಾಂಗ್ರೆಸ್‌ಗೆ ಭಯ ಶುರುವಾಗಿದೆ ಎಂದು ಹೇಳಿದರು.

ಇನ್ನು ಶ್ರೀನಿವಾಸಪುರದಲ್ಲಿ ನಡೆದ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಇಬ್ರಾಹಿಂ, ನಪುಂಸಕನ ಕಥೆಯೊಂದನ್ನು ಹೇಳುತ್ತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಟಾಂಗ್ ನೀಡಿದ್ದಾರೆ. ಅತ್ತ ಗಂಡಸರನ್ನು ಎಣಿಸಿದರೂ ಲೆಕ್ಕದಲ್ಲಿ ಇರುತ್ತಾನೆ. ಇತ್ತ ಹೆಂಗಸರನ್ನು ಎಣಿಸಿದರೂ ಲೆಕ್ಕದಲ್ಲಿರುತ್ತಾನೆ ಎಂದರು.

 

Share Post