DistrictsPolitics

ಸಿದ್ದರಾಮಯ್ಯ ಮನಸ್ಥಿತಿಗೆ ಪಾಕ್‌ ಸೇಫ್‌; ಸಿ.ಟಿ.ರವಿ

ಚಿಕ್ಕಮಗಳೂರು; ಸಿದ್ದರಾಮಯ್ಯ ಅವರ ಮನಸ್ಥಿತಿಗೆ ಪಾಕಿಸ್ತಾನ ಸೇಫ್‌. ಅವರು ಅಲ್ಲಿಗೆ ಹೋಗೋದೇ ಬೆಟರ್‌ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರ ಸಂಬಂಧ ಮಾತನಾಡಿದ ಅವ್ರು, ನಮ್ಮ ದೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ಕ್ಷೇತ್ರ ಸೇಫ್‌ ಅಲ್ಲ. ಪಾಕಿಸ್ತಾನವೇ ಅವರಿಗೆ ಸೇಫ್‌ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಇಲ್ಲಿ ಬಿಜೆಪಿ ನಾಯಕರ ಕಾಟವಿದೆ. ಇನ್ನು ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌, ಖರ್ಗೆ ಮುಂತಾದವರ ಕಾಟವಿದೆ. ಆದ್ರೆ, ಪಾಕಿಸ್ತಾನಕ್ಕೆ ಹೋದರೆ ಅಲ್ಲಿ ಅವರಿಗೆ ಕಾಟ ಕೊಡುವವರು ಯಾರೂ ಇರೋದಿಲ್ಲ ಎಂದು ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

Share Post