Districts

ಕಾಂಗ್ರೆಸ್‌ ನಾಯಕರೆಲ್ಲಾ ಜೈಲಿನಲ್ಲೇ ಇರಬೇಕು; ನಳಿನ್‌ ಕುಮಾರ್‌ ಕಟೀಲ್‌

ಹೊಸಪೇಟೆ; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 23 ಮಂದಿ ಕೊಲೆಯಾಗಿದ್ದರು. ಅವರ ಆಗ್ರಹದಂತೆ ಜೈಲಿಗೆ ಹಾಕುವುದಾದರೆ ಕಾಂಗ್ರೆಸ್‌ ನಾಯಕರೆಲ್ಲಾ ಜೈಲಿನಲ್ಲೇ ಇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಹಿನ್ನೆಲೆಯಲ್ಲಿ ಹೊಸಪೇಟೆಗೆ ಆಗಮಿಸಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿ ನಳಿನ್‌ ಕುಮಾರ್‌ ಕಟೀಲ್‌, ಸಿದ್ದು ಸಿಎಂ ಆಗಿದ್ದಾಗ 23 ಮಂದಿ ಕೊಲೆಯಾಗಿದ್ದರು. ಹೀಗಾಗಿ ಕಾಂಗ್ರೆಸ್‌ ನಾಯಕರನ್ನೇ ಜೈಲಿನಲ್ಲಿಡಬೇಕು. ಕಾಂಗ್ರೆಸ್‌ ನಾಯಕರನ್ನು ಜೈಲಿನಲ್ಲೇ ಇಡುವಂತೆ ಮುಖ್ಯಮಂತ್ರಿಗೆ ಕೇಳುತ್ತೇನೆ ಎಂದರು.

Share Post