CrimeDistrictsHealth

ದಾವಣಗೆರೆ ವೈದ್ಯರಿಂದ ಮುರುಘಾ ಶ್ರೀಗಳು ತಪಾಸಣೆ; ದಾವಣಗೆರೆಗೆ ಶಿಫ್ಟ್‌ ಆಗ್ತಾರಾ..?

ದಾವಣಗೆರೆ; ಎದೆನೋವು ಎಂದು ಹೇಳಿದ ಕಾರಣಕ್ಕಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಮುರುಘಾಶ್ರೀ ಅವರಿಗೆ ಎಂಆರ್‌ಐ, ಇಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯ ಅವರನ್ನು ಐಸಿಯುಗೆ ಶಿಫ್ಟ್‌ ಮಾಡಲಾಗಿದೆ. ದಾವಣಗೆರೆಯಿಂದ ವೈದ್ಯರು ಹೃದಯ ತಜ್ಞರು ಆಗಮಿಸಿದ್ದು, ಶ್ರೀಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ತಜ್ಞರು ವೈದ್ಯರು ತಪಾಸಣೆ ಬಳಿಕ ಶ್ರೀಗಳನ್ನು ಇಲ್ಲಿಯೇ ಇರಿಸಬೇಕೆ ಇಲ್ಲವೇ ಬೇರೆಡೆ ಸ್ಥಳಾಂತರಿಸಬೇಕೆ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಜಿಲ್ಲಾಸ್ಪತ್ರೆ ಸರ್ಜನ್‌ ಡಾ.ಬಸವರಾಜು ಮಾಹಿತಿ ನೀಡಿದ್ದಾರೆ.

ಮುರುಘಾ ಶ್ರೀಗಳಿಗೆ ಮೂವರು ವೈದ್ಯರು ಈಗಾಗಲೇ ತಪಾಸಣೆ ನಡೆಸಿದ್ದಾರೆ. ಡಾ. ಲೀಲಾ ರಾಘವ್‌, ಡಾ.ಶಾಲಿ ಮಂಜಪ್ಪ, ಡಾ.ದಿನೇಶ್‌ ಅವರು ಚಿಕಿತ್ಸೆ ನೀಡಿ, ತಪಾಸಣೆಗೊಳಪಡಿಸಿದ್ದಾರೆ. ಈಗ ದಾವಣಗೆರೆಯಿಂದ ಬಂದಿರುವ ತಜ್ಞರು ತಪಾಸಣೆ ನಡೆಸಲಿದ್ದಾರೆ. ಅಗತ್ಯಬಿದ್ದರೆ ಶ್ರೀಗಳನ್ನು ಬೆಂಗಳೂರಿನ ಜಯದೇವ ಅಥವಾ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಗೆ ಶಿಫ್ಟ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share Post