DistrictsPolitics

ಫೆ 27ರಿಂದ ಮೇಕೆದಾಟು ಪಾದಯಾತ್ರೆ ಪುನರಾರಂಭ : ಕಾಂಗ್ರೆಸ್‌ ಟ್ವೀಟ್‌

ಬೆಂಗಳೂರು : ಕೊರೊನಾ ಕಾರಣದಿಂದ ಮೇಕೆದಾಟು ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಕಾಂಗ್ರೆಸ್‌ ಈಗ ಮತ್ತೆ ಪುನರಾರಂಭಿಸುವುದಾಗಿ ಘೋಷಿಸಿದೆ.

ಡಿಕೆ ಶಿವಕುಮಾರ್‌ ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಮೇಕೆದಾಟು ಪಾದಯಾತ್ರೆಯ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಮನಗರಕ್ಕೆ ಮೊಟುಕುಗೊಂಡಿದ್ದ ಪಾದಯಾತ್ರೆ ಅಲ್ಲಿಂದಲೇ ಆರಂಭವಾಗಲಿದೆ. 6ದಿನಗಳ ಪಾದಯಾತ್ರೆ ಬಾಕಿ ಇದ್ದು ಅದನ್ನು ಪೂರ್ಣಗೊಳಿಸುವುದಾಗಿ ಕಾಂಗ್ರೆಸ್‌ ತಿಳಿಸಿದೆ. ಫೆ 27ಕ್ಕೆ ರಾಮನಗರದಿಂದ ಪಾದಯಾತ್ರೆ ಪುನರಾರಂಭವಾಗಲಿದೆ.

ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಈ ಪಾದಯಾತ್ರೆಯನ್ನು ಆರಂಭಿಸಿತ್ತು. ಕೋವಿಡ್‌ ಸೋಂಕು ಕಮ್ಮಿ ಆದ ಬೆನ್ನಲ್ಲೇ ಇದನ್ನು ಮತ್ತೆ ಪುನರಾರಂಭ ಮಾಡಲು ಕಾಂಗ್ರೆಸ್‌ ತೀರ್ಮಾನಿಸಿದೆ.

Share Post