Districts

ಅಮಿತ್ ಷಾಗೆ ಪತ್ರ ಬರೆದ ಒಡನಾಡಿ ಸಂಸ್ಥೆ

ಮೈಸೂರು; ಸ್ಯಾಂಟ್ರೋ ರವಿ ವಿರುದ್ಧ ಒಡನಾಡಿ‌ ಸಂಸ್ಥೆ
ಕೇಂದ್ರ ಸಚಿವ ಅಮಿತ್‌ಶಾ ಗೆ ದೂರು ನೀಡಿದೆ.

ಒಡನಾಡಿ ಮುಖ್ಯಸ್ಥ ಸ್ಟ್ಯಾನ್ಲಿ ಹಾಗೂ ಪರಶುರಾಮ್ ಅವರು ಅಮಿತ್ ಷಾಗೆ ಪತ್ರ ಬರೆದಿದ್ದಾರೆ. ಅನೈತಿಕ ಚಟುವಟಿಕೆ, ವರ್ಗಾವಣೆ ದಂದೆ, ಅಕ್ರಮ ಹಣ ಸಂಪಾದನೆ ಬಗ್ಗೆ ಈ ಪತ್ರದಲ್ಲಿ ಬರೆಯಲಾಗಿದೆ.

ಸ್ಯಾಂಟ್ರೋ ರವಿ ವಿರುದ್ಧ ಆಗಿರುವ ಎಫ್‌ಐಆರ್ ಜೊತೆಗೆ ಸೇರಿಸಿ ಪತ್ರ ಬರೆಯಲಾಗಿದೆ. ಸಂತ್ರಸ್ತೆಯ ದೂರು, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಂ ಪುತ್ರ, ಗೋಲ್ಡ್ ಬಿಸ್ಕೇಟ್‌ಗಳು ಹಾಗೂ ಕಂತೆ ಕಂತೆ ಹಣದ ಜೊತೆಗಿರುವ ಪೋಟೋಗಳನ್ನು ಕೂಡಾ ಪತ್ರದ ಜೊತೆಗೆ ರವಾನಿಸಲಾಗಿದೆ.

ಸ್ಯಾಂಟ್ರೋ ರವಿ ಅಕ್ರಮವಾಗಿ ಹೊಂದಿರುವ ಆಸ್ತಿಗಳ ವಿವರ ಹಾಗೂ ಮೈಸೂರು ಹಾಗೂ ಬೆಂಗಳೂರಿನಲ್ಲಿ ಹೊಂದಿರುವ ಮನೆಗಳ ವಿಳಾಸ. 2005ರಲ್ಲಿ ಆತನ ಮೇಲಿದ್ದ ಗೂಂಡಾ ಕಾಯ್ದೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಮೂಲಕ ಆರೋಪಿಯ ಮೇಲೆ ಸೂಕ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.

Share Post