CrimeDistricts

ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿ ನಂಬಿ ಜೀವ ಕಳೆದುಕೊಂಡ ಉಪನ್ಯಾಸಕಿ

ಬಸವಕಲ್ಯಾಣ; ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಗೆ ಎರಡೂವರೆ ಲಕ್ಷ ರೂಪಾಯಿ ಕೊಟ್ಟು ಮೋಸಹೋಗಿದ್ದ ಉಪನ್ಯಾಸಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರದ ಆರತಿ ಕನಾಟೆ ಎಂಬಲ್ಲಿ ನಡೆದಿದೆ.

28 ವರ್ಷದ ಆರತಿ ಕನಾಟೆ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ. ಆರತಿ ಅವರಿಗೆ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬ ಪರಿಷಯವಾಗಿದ್ದು, ಅದು ಸ್ನೇಹಕ್ಕೆ ತಿರುಗಿದೆ. ಆತ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಗಳಿಸಬಹುದು ಎಂದು ನಂಬಿಸಿದ್ದಾನೆ. ಇದನ್ನು ನಂಬಿ ಆರತಿ ಸಾಲ ಮಾಡಿ ಎರಡೂವರೆ ಲಕ್ಷ ರೂಪಾಯಿ ಕೊಟ್ಟಿದ್ದಾಳೆ. ನಂತರ ಇನ್ನೂ 80 ಸಾವಿರ ಹೂಡಿಕೆ ಮಾಡಿದರೆ ಎಲ್ಲಾ ಹಣ ವಾಪಸ್‌ ಬರುತ್ತೆ ಎಂದು ಹೇಳಿದ್ದಾನೆ.

ಆದ್ರೆ ಹಣ ಹೊಂದಿಸಲಾಗದೇ ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಕ್ಕೂ ಮುಂಚೆ ಆಕೆ ಡೆತ್‌ ನೋಟ್‌ ಬರೆದಿಟ್ಟಿದ್ದಳು.

 

Share Post