Districts

ಹೊಸ ವರ್ಷ ಹಿನ್ನೆಲೆ: ಕೆಆರ್‌ಎಸ್‌ ಪ್ರವೇಶಕ್ಕೆ ನಿರ್ಬಂಧ

ಮಂಡ್ಯ: ಹೊಸ ವರ್ಷ ಆಚರಣೆಯಿಂದ ಜನರು ಬೇರೆ ಬೇರೆ ಕಡೆ ಎಂಜಾಯ್‌ ಮಾಡಲು ಹೊರಟಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆ ಕೆಆರ್‌ ಎಸ್‌ ಗೆ ಸಾವಿರಾರು ಜನ ಪ್ರತಿನಿತ್ಯ ಆಗಮಿಸುತ್ತಿದ್ದರು. ಆದರೆ ಇದೀಗ ಹೊಸ ವರ್ಷ ಹಿನ್ನೆಲೆಯಲ್ಲಿ ಕಾವೇರಿ ತೀರದ ನದಿಗಳಿಗೆ ಸಾರ್ವಜನಿಕರು ಬಾರದಂತೆ ಕಡಿವಾಣ ಹಾಕಿದ್ದಾರೆ. ಕೆಆರ್‌ಎಸ್‌ ಸುತ್ತಮುತ್ತ ಪ್ರದೇಶಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಶ್ರೀರಂಗಪಟ್ಟಣ ತಹಸೀಲ್ದಾರ್‌ ಆದೇಶ ಹೊರಡಿಸಿದ್ದಾರೆ. ಇಂದು ಬೆಳಗ್ಗೆಯಿಂದ ನಾಳೆ ರಾತ್ರಿ ೧೦ ಗಂಟೆ ವರೆಗೆ ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಕೆಆರ್‌ಎಸ್‌ ಸುತ್ತಮುತ್ತಲು ಇರುವ ಎಡಮುರಿ, ಬಲಮುರಿ ಪ್ರದೇಶದಲ್ಲಿ ೧೪೪ ಸೆಕ್ಷನ್‌ ಜಾರಿ ಮಾಡಲಾಗಿದೆ.

Share Post