CrimeDistricts

ಕೆಪಿಟಿಸಿಎಲ್‌ ಅಕ್ರಮ ನೇಮಕಾತಿ; ಮತ್ತಿಬ್ಬರು ಅರೆಸ್ಟ್‌

ಬೆಳಗಾವಿ; ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಮತ್ತಿಬ್ಬರು ಅಂದರ್‌ ಆಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಈಗ 22ಕ್ಕೆ ಏರಿದೆ.

ಗೋಕಾಕ್ ಬಳಿಯ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವಪ್ಪ ರಕ್ಷಿ (೨೬) ಹಾಗೂ ಚಿಕ್ಕೋಡಿ ಸಮೀಪದ ಜಾಗನೂರಿನ ನಾಗಪ್ಪ ದೊಡ್ಡಮನಿ (೨೭) ಬಂಧಿತರು.
ಬಂಧಿತ ಮಲ್ಲಪ್ಪ ರಕ್ಷಿ ಪರೀಕ್ಷಾ ಕೇಂದ್ರಕ್ಕೆ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಪೂರೈಕೆ ಮಾಡಿದ್ದ ಎಂದು ತಿಳಿದುಬಂದಿದೆ. ಜೊತೆಗೆ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿದ್ದಾನೆಂದೂ ಹೇಳಲಾಗಿದೆ. ಹೀಗಾಗಿ ಮಲ್ಲಪ್ಪ ರಕ್ಷಿಯನ್ನು ಬಂಧಿಸಲಾಗಿದ್ದು, ಆತನ ಬಳಿ ಇದ್ದ ಒಂದು ಮೊಬೈಲ್, ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.

ಇನ್ನು ನಾಗೇಶ ದೊಡ್ಡಮನಿ ಅಭ್ಯರ್ಥಿಯಾಗಿದ್ದು, ಈಗ ಎಲೆಕ್ಟ್ರಾನಿಕ್ ಡಿವೈಸ್‌ ಸಹಾಯದಿಂದ ಪರೀಕ್ಷೆ ಬರೆದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Share Post