CrimeDistricts

ಮಹಾರಾಷ್ಟ್ರದಲ್ಲಿ ರಾಜ್ಯ ಬಸ್‌ಗೆ ಕಲ್ಲು; ಮೀರಜ್‌ ಮಾರ್ಗ ಬಂದ್

ಬೆಳಗಾವಿ; ಮರಾಠಿಗರ ಪುಂಡಾಟ ಮುಂದುವರೆದಿದೆ. ನಿನ್ನೆ ನಮ್ಮ ರಾಜ್ಯದ ಬಸ್‌ಗೆ ಮಸಿ ಬಳಿದಿದ್ದ ಮರಾಠಿಗರು ಇಂದು ಕಲ್ಲು ತೂರಿದ್ದಾರೆ. ಪುಣೆಯಿಂದ ಅಥಣಿಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಹಾರಾಷ್ಟ್ರದ ಗಡಿಯಲ್ಲಿ ಕಲ್ಲು ತೂರಲಾಗಿದೆ. ಕಳೆದ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಬಸ್ಸಿನ ಮುಂದಿನ ಗಾಜು ಹಾಗೂ ಎರಡು ಕಿಟಕಿ ಒಡೆದಿವೆ.

ಬಸ್ ಸಂಚರಿಸುತ್ತಿರುವಾ ಅಡ್ಡಬಂದು ಕಲ್ಲು ತೂರಿ ಪರಾರಿಯಾಗಿದ್ದಾರೆ. ಈ ಕಾರಣದಿಂದಾಗಿ ಮೀರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕದ ಎಲ್ಲ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 

Share Post