DistrictsPolitics

ಅರಕಲಗೂಡಿಗೆ ನಾನೇ ಜೆಡಿಎಸ್‌ ಅಭ್ಯರ್ಥಿ; ಘೋಷಿಸಿಕೊಂಡ ಎ.ಮಂಜು

ಹಾಸನ; ಅರಕಲಗೂಡು ಜೆಡಿಎಸ್‌ ಅಭ್ಯರ್ಥಿ ನಾನೇ ಎಂದು ಎ.ಮಂಜು ಘೋಷಣೆ ಮಾಡಿಕೊಂಡಿದ್ದಾರೆ. ಎ.ಮಂಜು ಅವರು ನಿನ್ನೆ ತಮ್ಮ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯಲ್ಲಿ ತಾನು ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಾನೇ ಜೆಡಿಎಸ್‌ಗ ಅಭ್ಯರ್ಥಿ. ನಾವೆಲ್ಲಾ ಇಂದಿನಿಂದ ಜೆಡಿಎಸ್‌ ನವರು ಎಂದು ಎಲ್ಲರಿಂದ ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಇಂದಿನಿಂದ ಜೆಡಿಎಸ್‌ಗೆ ಸೇರಿ ಎ. ಮಂಜು ಅವರನ್ನು ಗೆಲ್ಲಿಸುತ್ತೇವೆ ಎಂದು ಸೇರಿದ್ದವರೆಲ್ಲಾ ಆಣೆ ಪ್ರಮಾಣ ಮಾಡಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ಜೈಕಾರ ಕೂಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅರಕಲಗೂಡು ಕ್ಷೇತ್ರದಿಂದ ಎ.ಮಂಜುಗೆ ಟಿಕೆಟ್ ನೀಡೋದಾಗಿ ಹೆಚ್ಡಿಕೆ ಹೇಳಿಕೆ ಕೊಟ್ಟಿದ್ದರು.

ಮಾರ್ಚ್‌ 11 ಅಥವಾ 12ರಂದು ಬೆಂಗಳೂರಿನಲ್ಲಿ ಎ.ಮಂಜು ಅವರು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರಲಿದ್ದು, ಮಾರ್ಚ್‌ 16 ರಂದು ಅರಕಲಗೂಡಿನಲ್ಲಿ ಪಂಚರತ್ನ ಯಾತ್ರೆ ಕಾರ್ಯಕ್ರಮ ನಡೆಯಲಿದೆ.

Share Post