DistrictsPolitics

ನನ್ನನ್ನು ವೈಟ್ ಕಾಲರ್ ರಾಜಕಾರಣಿ ಅಂತಾರೆ; ಡಾ.ಜಿ.ಪರಮೇಶ್ವರ್

ತುಮಕೂರು; ಜನರೊಂದಿಗೆ ಇದ್ದು ಅಭಿವೃದ್ದಿ ಕೆಲಸ ಮಾಡುತ್ತಿದ್ದರೂ ನನ್ನನ್ನು ವೈಟ್ ಕಾಲರ್ ರಾಜಕಾರಣಿ ಎನ್ನುತ್ತಾರೆ‌ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ಕೊರಟಗೆರೆಯ ವಿಧಾನಸಭಾ ಕ್ಷೇತ್ರದ ಐದು ವರ್ಷದ ಅಭಿವೃದ್ದಿ ಕುರಿತ ಹೆಜ್ಜೆ ಗುರುತು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸುಮಾರು 2,673 ಕೋಟಿ ರೂಪಾಯಿ ವೆಚ್ಚದ 4073 ಕಾಮಗಾರಿಗಳು ಕ್ಷೇತ್ರದಲ್ಲಿ ಪೂರ್ಣಗೊಂಡಿವೆ. ರಸ್ತೆ, ಶಾಲೆ, ನೀರು, ವಸತಿ ಶಾಲೆ, ಆಸ್ಪತ್ರೆಗಳ ನಿರ್ಮಾಣ ಆಗಿದೆ. ಜಲ ಜೀವನ್ ಮಿಶನ್ ಅಡಿ ಕಾಮಗಾರಿ ಪ್ರಾರಂಭವಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರೊಂದಿಗೆ ಇದ್ದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಆದರೂ ಕೆಲವರು ನನ್ನನ್ನು ವೈಟ್ ಕಾಲರ್ ರಾಜಕಾರಣಿ ಅಂತಾರೆ ,ನಾನು ಜನರ ಮದ್ಯೆ ಬೆಳೆದವನು ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಬಾರಿ ದಳದ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದೆನೆ, ಕ್ಷೇತ್ರದ ಜನರಿಗೆ ಆಭಾರಿಯಾಗಿದ್ದು, ಉಪಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದಕ್ಕ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು‌.

Share Post