Districts

ಈಶ್ವರಪ್ಪ ಅವರ ಬಂಧನ ಯಾಕೆ ಆಗಬೇಕು..?; ಹೆಚ್‌ಡಿಕೆ ಪ್ರಶ್ನೆ

ವಿಜಯಪುರ: ಈಶ್ವರಪ್ಪ ಅವರ ಬಂಧನ ಯಾಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಾಗ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕೆಂದು ನಾನೂ ಕೂಡಾ ಆಗ್ರಹಿಸಿದ್ದೆ. ಈಗ ಅವರು ನೈತಿಕೆ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರ ಬಂಧನದ ಅವಶ್ಯಕತೆ ಇಲ್ಲ ಎಂದು ಹೇಳಿದರು.

 

ಈಶ್ವರಪ್ಪ ಅವರ ವಿರುದ್ಧ ಆರೋಪ ಇದೆ. ಅಧಿಕಾರದಲ್ಲಿದ್ದರೆ, ತನಿಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಅವರ ರಾಜೀನಾಮೆ ಕೇಳಬಹುದು. ಆದ್ರೆ ಅವರ ಬಂಧನ ಮಾಡೋದು, ಬಿಡೋದು ತನಿಖೆ ಮಾಡುತ್ತಿರುವವರಿಗೆ ಬಿಟ್ಟಿದ್ದು. ಹೀಗಾಗಿ ಈಶ್ವರಪ್ಪ ಅವರ ಬಂಧನಕ್ಕೆ ಆಗ್ರಹಿಸುವುದು ಎಷ್ಟು ಸರಿ ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದ್ದಾರೆ.

Share Post