DistrictsPolitics

ಅವನೇನು ಉತ್ತಮನಾ..? ಯಾವುದರಲ್ಲಿ ಉತ್ತಮ..?; ಹೆಚ್ಡಿಕೆ ವಿರುದ್ಧ ಗುಬ್ಬಿ ವಾಸು ವಾಗ್ದಾಳಿ

ತುಮಕೂರು; ಗುಬ್ಬಿ ಶಾಸಕ ಶ್ರೀನಿವಾಸ್‌ ಜೆಡಿಎಸ್‌ ನಾಯಕ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದಾರೆ. ಏಕವನಚದಲ್ಲೇ ಮಾತನಾಡಿರುವ ಅವರು ಅವನೇನು ಉತ್ತಮನಾ, ಅವನು ಯಾವುದರಲ್ಲಿ ಉತ್ತಮ ಎಂದು ಪ್ರಶ್ನೆ ಮಾಡಿದ್ದಾರೆ.

 

ತುಮಕೂರಿನಲ್ಲಿ ಮಾತನಾಡಿದ ಗುಬ್ಬಿ ಕ್ಷೇತ್ರದ ಜೆಡಿಎಸ್‌ ಶಾಸಕ ಶ್ರೀನಿವಾಸ್‌, ನಾನು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದೇನೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಆದ್ರೆ ನಾನು ಮತದಾನ ಮಾಡಿದ ನಂತರ ಬ್ಯಾಲೆಟ್‌ ಪೇಪರ್‌ನ್ನು ಮೂರ್ನಾಲ್ಕು ನಿಮಿಷ ಅವರಿಗೆ ತೋರಿಸಿದ್ದೇನೆ. ನಾನು ಅವರಿಗೆ ಅದನ್ನು ಸರಿಯಾಗಿಯೇ ತೋರಿಸಿದ್ದೇನೆ. ಒಂದು ವೇಳೆ ನಾನು ಹೆಬ್ಬೆಟ್ಟು ಅಡ್ಡ ಹಿಡಿದಿದ್ದರೆ ತೆಗಿ ಎನ್ನಬಹುದಿತ್ತು. ಆಗ ಅವನೇನು ಕತ್ತೆ ಕಾಯುತ್ತಿದ್ದನಾ ಎಂದು ಪ್ರಶ್ನೆ ಮಾಡಿದ್ದಾರೆ.

 

ನಾನು ಕ್ರಾಸ್‌ ವೋಟಿಂಗ್‌ ಮಾಡಬೇಕು ಎಂದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೇ ಮಾಡುತ್ತಿದ್ದೆ. ಇವನಿಗೆ ನಾನು ಹೆದರಿಕೊಳ್ಳಬೇಕಿತ್ತಾ..? ನನಗಿರುವ ಮಾಹಿತಿ ಪ್ರಕಾರ ಅವರಿಗೆ ಬೇಕಾದವರಿಂದಲೇ ಕ್ರಾಸ್‌ ವೋಟಿಂಗ್‌ ಮಾಡಿಸಿದ್ದಾರೆ. ಅದನ್ನು ನನ್ನ ತಲೆಗೆ ಕಟ್ಟಲು ಬರುತ್ತಿದ್ದಾರೆ. ಆ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಈ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

ಒಕ್ಕಲಿಗರನ್ನು ತುಳಿಯೋದೇ ಇವನ ಒನ್‌ ಪಾಯಿಂಟ್‌ ಅಜೆಂಡಾ..? ಇನ್ನೊಂದು ಜನ್ಮ ಎತ್ತಿ ಬಂದರೂ ಜೆಡಿಎಸ್‌ಗೆ ಬಹುಮತ ಬರೋದಿಲ್ಲ. ಇವನು ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾದವನು ಅಷ್ಟೇ ಎಂದು ಕುಮಾರಸ್ವಾಮಿಯವರನ್ನು ಏಕವಚನದಲ್ಲಿ ಬೈದಿದ್ದದಾರೆ.

ಇನ್ನು ಹೀಗಿರುವಾಗಲೇ ಗುಬ್ಬಿಯ ಶಾಸಕ ಶ್ರೀನಿವಾಸ್‌ ಮನೆ ಎದುರು ಹೈಡ್ರಾಮಾ ನಡೆದಿದೆ. ಜೆಡಿಎಸ್‌ ಕಾರ್ಯಕರ್ತರು ಶಾಸಕ ಶ್ರೀನಿವಾಸ್‌ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಆಗಮಿಸಿದ ಶಾಸಕ ಶ್ರೀನಿವಾಸ್‌ ಬೆಂಬಲಿಗರು, ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

 

Share Post