BengaluruDistrictsPolitics

ನನ್ನ ತಾತನಿಗೆ ಮಂತ್ರಿ ಸ್ಥಾನ ಕೊಡಿ ಅಂಕಲ್‌; ರಾಹುಲ್‌ಗೆ ಟಿ.ಬಿ.ಜಯಚಂದ್ರ ಮೊಮ್ಮಗಳ ಪತ್ರ

ತುಮಕೂರು; ನನ್ನ ತಾತನಿಗೆ ಮಂತ್ರಿ ಸ್ಥಾನ ಕೊಡಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಮೊಮ್ಮಗಳು ಆರ್ನಾ ಅವರು ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದಾಳೆ. ಸಿದ್ದರಾಮಯ್ಯ ಸಂಪುಟದಲ್ಲಿ ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರವನ್ನು ಸೇರಿಸಿಕೊಂಡಿಲ್ಲ. ಹೀಗಾಗಿ ಬೇಸರಗೊಂಡಿರುವ ಅವರ ಮೊಮ್ಮಗಳು ಆರ್ನಾ, ರಾಹುಲ್‌ ಗಾಂಧಿಗೆ ಪತ್ರ ಬರೆದು ತಮ್ಮ ತಾತನಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಮಾಡಿದ್ದಾಳೆ.

ನನ್ನ ತಾತ ಮಂತ್ರಿ ಸ್ಥಾನಕ್ಕೆ ಸೂಕ್ತವಾದವರು. ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ತುಂಬಾನೇ ಬೇಸರವಾಗಿದೆ. ನನ್ನ ತಾತ ತುಂಬಾ ಶ್ರಮಜೀವಿ. ಯಾವಾಗಲೂ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವರಿಗೆ ಜೀವಾಳವಾಗಿರುವುದರಿಂದ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಈಗಲಾದರೂ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ ಎಂದು ಆರ್ನಾ ಸಂದೀಪ್‌ ಅವರು ರಾಹುಲ್‌ ಗಾಂಧಿ ಪತ್ರ ಬರೆದಿದ್ದಾಳೆ. ಜೊತೆಗೆ ವಿಡಿಯೋ ಮಾಡಿಯೂ ಮನವಿ ಮಾಡಿಕೊಂಡಿದ್ದಾಳೆ.

ನನ್ನ ತಾತ ಜನರನ್ನು ತುಂಬಾ ಪ್ರೀತಿ ಮಾಡುತ್ತಾರೆ. ಅವರಿಗೆ ಸಚಿವ ಸ್ಥಾನ ಕೊಡುವಂತೆ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ.

Share Post