Districts

ದೇಶದಲ್ಲಿ ಇರಲು ಇಷ್ಟವಿಲ್ಲದಿದ್ದರೆ ಪಾಕ್‌ಗೆ ಹೋಗಲಿ; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕೆಂಡ

ಶಿವಮೊಗ್ಗ; ಮುಸಲ್ಮಾನರ ಜಾಗ, ಮುಸಲ್ಮಾನರ ಏರಿಯಾ ಅಂತ ಎಲ್ಲಿದೆ..? ಈ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಈ ದೇಶದಲ್ಲಿ ಇರಲು ಯೋಗ್ಯತೆ ಇಲ್ಲದ ವ್ಯಕ್ತಿ ಎಂದು ಮಾಜಿ ಸಚಿವ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಸಾವರ್ಕರ್‌ ಪೋಸ್ಟರ್‌ ವಿಚಾರವಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಮುಸಲಾಮ್ಮಾನರಿಗೆ ಅಂತ ಪ್ರತ್ಯೇಕ ಜಾಗ ಇಲ್ಲ. ಹಾಗೆ ಇದೆ ಅಂತ ಹೇಳುವುದಾದರೆ, ಇಲ್ಲಿ ಸಿದ್ದರಾಮಯ್ಯ ಅವರಿಗೂ ಜಾಗವಿಲ್ಲ. ಅವರು ಈ ದೇಶದಲ್ಲಿ ಇರೋಕೆ ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಈಶ್ವರಪ್ಪ ಹೇಳಿದ್ದಾರೆ.

Share Post