DistrictsPolitics

ಸಿದ್ದರಾಮಯ್ಯ ಕುಡಿದಾಗ ಒಂದು, ಕುಡಿಯದಿದ್ದಾಗ ಒಂದು ಮಾತಾಡ್ತಾರಂತೆ..!

ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಡಿದಾಗ ಒಂದು ಕುಡಿಯದಿದ್ದಾಗ ಒಂದು ಮಾತಾಡ್ತಾರೆ. ಅವರು ಯಾವಾಗ ಕುಡಿದಿರುತ್ತಾರೋ, ಯಾವಾಗ ಕುಡಿದಿರಲ್ವೋ ಒಂದೂ ಗೊತ್ತಾಗಲ್ಲ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರು ಯಾವಾಗ ಏನು ಮಾತನಾಡುತ್ತಾರೋ ಗೊತ್ತಾಗಲ್ಲ. ಅವರು ಕುಡಿದಾಗ ಒಂದು ರೀತಿಯಲ್ಲಿ ಮಾತನಾಡುತ್ತಾರೆ. ಕುಡಿಯದಿದ್ದಾಗ ಮಾತನಾಡುವುದೇ ಬೇರೆ ಎಂದು ವಾಗ್ದಾಳಿ ನಡೆಸಿದರು.

Share Post