DistrictsNationalNewsPolitics

ರಾತ್ರಿ ಎಲ್ಲಾ ಮಟನ್‌ ತಿಂತೀರಿ, ಹಗಲಲ್ಲಿ ಮಾಂಸಾಹಾರಿಗಳನ್ನು ಬೈತೀರಿ; ಖರ್ಗೆ ಮತ್ತೊಂದು ವಿವಾದ

ಕಲಬುರಗಿ; ಕಾಂಗ್ರೆಸ್‌ನವರು ವಿವಾದಿತ ಹೇಳಿಕೆಗಳನ್ನು ನೀಡೋದಕ್ಕೂ ಬಿಜೆಪಿಯವರು ಅದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳೋದಕ್ಕೂ ಸರಿಹೋಗಿದೆ. ಬಿಜೆಪಿಗೆ ಉಪಯೋಗವಾಗಲೀ ಅಂತಾನೆ ಕಾಂಗ್ರೆಸ್‌ ನಾಯಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಅಂತ ಕಾಣುತ್ತೆ. ಮೊನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿ ವಿವಾದ ಸೃಷ್ಟಿಸಿದ್ದರು. ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಕೂಡಾ ಮೋದಿ ನಾಲಾಯಕ್‌ ಎಂದು ವಿವಾದಕ್ಕಾಗಿದ್ದರು. ಇದೀಗ ಖರ್ಗೆಯವರು ವಿವಾದವಾಗುವಂತಹ ಮತ್ತೊಂದು ಹೇಳಿಕೆ ನೀಡಿದ್ದಾರೆ. ರಾತ್ರಿ ಎಲ್ಲರೂ ಮಟನ್ ತಿಂತೀರಿ. ಹಗಲೊತ್ತಲ್ಲಿ ಮಾಂಸಾಹಾರಿಗಳಿಗೆ ಬೈತೀರಿ ಎಂದು ಬಿಜೆಪಿಯವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿರುವ ಅವರು, ಬಿಜೆಪಿಯವರು ಬರೀ ಜಗಳ ಹಚ್ಚಿ ಮತ ಪಡೆಯುವುದಕ್ಕೆ ನೋಡುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಮೋದಿಯವರು ಬೆಳಗ್ಗೆಯಿಂದ ಸಂಜೆಯವರೆಗೂ ನಾನು ಕೆಳವರ್ಗದವನು ಎಂದು ಅಳುತ್ತಿದ್ದಾರೆ. ಅದೇ ಅವರ ಕೆಲಸನಾ..?. ಅವರು ನಾನು ಕೆಳವರ್ಗದವಾನದ್ದರಿಂದ ನನ್ನನ್ನು ತುಳಿಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದ್ರೆ ಜಾತಿವ್ಯವಸ್ಥೆಯಲ್ಲಿ ನಾನು ಮೋದಿಯವರಿಗಿಂತಲೂ ಕೆಳಗೆ ಇದ್ದೇನೆ. ನಾನು ದಲಿತ ಸಮುದಾಯಕ್ಕೆ ಸೇರಿದ್ದೇನೆ ಎಂದು ಹೇಳಿದ್ದಾರೆ.

Share Post