DistrictsPolitics

ಬಿಜೆಪಿ ಡಬಲ್‌ ಎಂಜಿನ್‌, ಕಾಂಗ್ರೆಸ್‌ ಸ್ಟಿಯರಿಂಗ್‌; ಸುಧಾಕರ್‌

ದೊಡ್ಡಬಳ್ಳಾಪುರ; ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ಏಳರಿಂದ ಎಂಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಪಕ್ಷದ ಬಗ್ಗೆ ರೋಸಿಹೋಗಿದ್ದ ಜನರು ಅದನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ನಶಿಸಿಹೋಗುತ್ತಿದೆ. ಬಿಜೆಪಿಗೆ ಬಗ್ಗೆ ಜನ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆ ಪ್ರಾಬಲ್ಯವಿರಲಿಲ್ಲ. ಆದ್ರೆ ಈ ಬಾರಿ ಏಳರಿಂದ ಎಂಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಸುಧಾಕರ್‌ ಹೇಳಿದರು.

ರೈತರ ಮಕ್ಕಳ ಸಬಲೀಕರಣಕ್ಕಾಗಿ ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯಾನಿಧಿಯೋಜನೆಯಿಂದ ಸುಮಾರು ಹತ್ತು ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಿದೆ ಎಂದು ಸಚಿವ ಸುಧಾಕರ್‌ ಹೇಳಿದರು. ದೊಡ್ಡಬಳ್ಳಾಪುರ ಇತಿಹಾಸದಲ್ಲಿ ಇಂತಹ ಸಮಾವೇಶ ನಡೆದಿರಲಿಲ್ಲ. ಬಿಜೆಪಿ ಡಬಲ್‌ ಎಂಜಿನ್‌, ಕಾಂಗ್ರೆಸ್‌ ಡಬಲ್‌ ಸ್ಟಿಯರಿಂಗ್‌, ನಿಮಗೆ ಡಬಲ್‌ ಎಂಜಿನ್‌ ಬೇಕಾ ಅಥವಾ ಡಬಲ್‌ ಸ್ಟಿಯರಿಂಗ್‌ ಬೇಕಾ ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಸುಧಾಕರ್‌ ಹೇಳಿದರು.

ಇದು ಸರ್ಕಾರದ ಸಾಧನೆಯನ್ನು ಅನಾವರಣಗೊಳಿಸುವ ಸಮಾವೇಶ. ಸರ್ಕಾರದ ರಿಪೋರ್ಟ್‌ ಕಾರ್ಡ್‌ನ್ನು ಜನರ ಮುಂದಿಡುತ್ತಿದ್ದೇವೆ. ಈ ಸಮಾವೇಶ ಯಾವುದೋ ಒಂದು ವ್ಯಕ್ತಿ ಪೂಜೆ ಅಲ್ಲ ಎಂದು ಸುಧಾಕರ್‌ ಇದೇ ವೇಳೆ ಹೇಳಿದರು.

Share Post