Districts

ಮೂರ್ಖರು ಮಾತ್ರ 4-5 ತಿಂಗಳಿಗೆ ಸಿಎಂ ಬದಲಿಸ್ತಾರೆ; ಸಚಿವ ಡಾ.ಕೆ.ಸುಧಾಕರ್‌

ಚಿಕ್ಕಬಳ್ಳಾಪುರ: ಮೂರ್ಖರು ಮಾತ್ರ ನಾಲ್ಕೈದು ತಿಂಗಳಿಗೆ ಸಿಎಂ ಬದಲಿಸ್ತಾರೆ. ಬೊಮ್ಮಾಯಿಯವರು ನಮ್ಮ ನಾಯಕರು. ಅವರು ಸಮರ್ಥವಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಅವರಿನ್ನೂ ಅಧಿಕಾರಕ್ಕೇರಿ ನಾಲ್ಕೈದು ತಿಂಗಳಾಗಿದೆ. ಆಗಲೇ ಬದಲಾವಣೆ ಮಾಡ್ತಾರೆ. ಬಿಜೆಪಿಯಲ್ಲಿ ಅದು ಸಾಧ್ಯವೇ ಇಲ್ಲ. ಮೂರ್ಖರು ಮಾತ್ರ ಇತಂಹ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು, ಸದ್ಯಕ್ಕೆ ನಮ್ಮಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿಎಂ ಬದಲಾವಣೆ ವಿಚಾರ ಊಹಾಪೋಹ ಅಷ್ಟೇ ಎಂದು ಹೇಳಿದರು. ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಮಾತನಾಡಿದ ಅವರು, ನಮ್ಮ ಬೆಂಬಲಿಗರಿಗೆ ಬೇಸರವಾಗಿರಬಹುದು. ಆದ್ರೆ, ಉಸ್ತುವಾರಿ ಬದಲಾದರೂ ಕೂಡಾ ನಾನು ಚಿಕ್ಕಬಳ್ಳಾಪುರದ ಜನರ ಜೊತೆಗಿರುತ್ತೇನೆ. ಸದಾ ನಾನು ಅವರ ಸಂಪರ್ಕದಲ್ಲಿರುತ್ತೇನೆ. ಅವರ ಸುಖ ದುಃಖಗಳೊಂದಿಗೆ ಭಾಗಿಯಾಗುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

 

Share Post