Districts

ಮೀಸಲಾತಿ‌ ವಿಚಾರ; ಸರ್ಕಾರ ಎಲ್ಲರಿಗೂ ಚಾಕೋಲೇಟ್ ಕೊಡ್ತಿದೆ – ಡಿಕೆಶಿ

ಬೆಳಗಾವಿ; ಮೀಸಲಾತಿ ವಿಚಾರವಾಗಿ ಸರ್ಕಾರ ಎಲ್ಲರಿಗೂ ಚಾಕೊಲೇಟ್ ನೀಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೀಸಲಾತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳಿವೆ. ಆದ್ರೆ ಸರ್ಕಾರ ಎಲ್ಲರಿಗೂ ಚಾಕೋಲೇಟ್ ನೀಡಲು ಮುಂದಾಗಿದೆ ಎಂದರು.

ಪಂಚಮಸಾಲಿಗರಿಗೆ 2ಎ ಮೀಸಲಾತಿ ನೀಡುವ ವಿಚಾರದ ಬಗ್ಗೆ ಪಕ್ಷದಲ್ಲಿ ನಮ್ಮ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತೇವೆ. ಆ ಸಮುದಾಯದವರು ಬಂದು ಭೇಟಿಯಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಒಕ್ಕಲಿಗರು ಕೂಡಾ ಮೀಸಲಾತಿ ಹೆಚ್ಚಿಸಲು ಕೇಳುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕೂಡಾ ಸ್ಪಷ್ಟನೆ ನೀಡಬೇಕು. ಎಲ್ಲಾ ಹಿಂದುಳಿದ ವರ್ಗಗಳಿಗೂ ಮೀಸಲಾತಿಯ ಪಾಲು ಸಿಗಬೇಕು ಎಂದು ಡಿಕೆಶಿ ಹೇಳಿದರು.

Share Post