CrimeDistricts

ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟ; 15 ಜನರಿಗೆ ಗಾಯ, 8 ಮಂದಿ ಗಂಭೀರ

ಕಲಬುರಗಿ; ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಮರಗಮ್ಮದೇವಿ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗಂಭೀರವಾಗಿ ಗಾಯಗೊಂಡಿರುವವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಹೊನ್ನಕಿರಣಗಿ ಗ್ರಾಮದಲ್ಲಿ ಮರಗಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ ಏರ್ಪಡಿಸಲಾಗಿತ್ತು. ಹೀಗಾಗಿ ಜಾತ್ರೆಯಲ್ಲಿ ಮದ್ದು ಹಾರಿಸುವವರನ್ನು ಗ್ರಾಮಕ್ಕೆ ಕರೆಸಲಾಗಿತ್ತು. ಮದ್ದು ಹಾರಿಸುವ ವೇಳೆ ಅದು ಅಲ್ಲಿಯೇ ಬಿದ್ದಿದೆ. ಅದು ಸ್ಫೋಟಗೊಂಡು ಪಕ್ಕದಲ್ಲೇ ಇದ್ದ ಮದ್ದು ಗುಂಡುಗಳಿಗೂ ಬೆಂಕಿ ಆವರಿಸಿದೆ. ಇದ್ರಿಂದ ಹೆಚ್ಚಿನ ಅನಾಹುತ ಸಂಭವಿಸಿದೆ. ಗಾಯಾಳುಗಳಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

Share Post