DistrictsPolitics

ಸಿದ್ದರಾಮಯ್ಯ ಮತಕ್ಕಾಗಿ ಭಾವನಾತ್ಮಕವಾಗಿ ಮಾತಾಡ್ತಿದ್ದಾರೆ; ಸಿಎಂ ಬೊಮ್ಮಾಯಿ

ಚಿಕ್ಕಮಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನಗೆ ಆರೋಗ್ಯ ಸರಿ ಇಲ್ಲ, ಬಿಪಿ ಶುಗರ್‌ ಇದೆ ಎಂದು ಜನರನ್ನು ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ಆದ್ರೆ ಅವರಿಗೆ ಏನೂ ಆಗುವುದು ಬೇಡ, ಅವರು ನೂರು ಕಾಲ ಬಾಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ನನಗೂ ವಯಸ್ಸಾಯ್ತು. ಆರೋಗ್ಯ ಬೇರೆ ಆಯಸ್ಸು ಕಡಿಮೆ ಮಾಡಿದೆ. ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, 2013ರಲ್ಲಿ ಕೂಡಾ ಸಿದ್ದರಾಮಯ್ಯ ಇದೇ ರೀತಿಯ ಮಾತುಗಳನ್ನಾಡಿದ್ದರು. ಆಗ ಜನ ಅದನ್ನು ನಂಬಿ ಮತ ಹಾಕಿದ್ದರು. ನಂತರ ಚುನಾವಣೆಯಲ್ಲಿ ಅವರ ಮತ ನಂಬದೇ ವಿರೋಧ ಪಕ್ಷದಲ್ಲಿ ಕೂರಿಸಿದರು. ಮುಂದಿನ ಚುನಾವಣೆಯಲ್ಲೂ ಜನ ಇಂತಹ ಮಾತುಗಳನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

Share Post