CrimeDistricts

ಹಾಡಹಗಲೇ ರೇಷ್ಮೆ ವ್ಯಾಪಾರಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದಲ್ಲಿ ಹಾಡಹಗಲೇ ರೇಷ್ಮೆ ವ್ಯಾಪಾರಿಯ ಮೇಲೆ ಅಟ್ಯಾಕ್‌ ನಡೆದಿದೆ. ವ್ಯಾಪಾರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ರೇಷ್ಮೆ ವ್ಯಾಪಾರಿ ಫೈರೋಜ್‌ ಅವರ ಎಡಗೈನ ಹೆಬ್ಬೆರಳು ಸಂಪೂರ್ಣ ಕಟ್ ಆಗಿದೆ. ಆದ್ರೆ ಫೈರೋಜ್‌ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದು ಪ್ರಾಣ ಕಾಪಾಡಿಕೊಂಡಿದ್ದಾರೆ.

ಅಜಾದ್ ನಗರದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರೇಷ್ಮೆ ವ್ಯಾಪಾರಿ ಫೈರೋಜ್‍ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು, ಏಕಾಏಕಿ ಲಾಂಗ್‌, ಮಚ್ಚಿನಿಂದ ದಾಳಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ನಗರ ಠಾಣೆಯ ಎದುರು ಅಮ್ಜದ್ ಎಂಬಾತನನ್ನು ಖಲಂಧರ್ ಎಂಬಾತ ಕೊಲೆ ಮಾಡಿದ್ದ. ಇದೀಗ ದಾಳಿಗೊಳಗಾಗಿರುವ ಫೈರೋಜ್‌ ಹಾಗೂ ಅಂದು ಕೊಲೆಯಾದ ಅಮ್ಜದ್‌ ಇಬ್ಬರೂ ಸ್ನೇಹಿತರಾಗಿದ್ದರು. ಅಮ್ಜದ್‌ ಕೊಲೆ ಆರೋಪಿ ಖಲಂಧರ್‌ ಜಾಮೀನಿನ ಮೇಲೆ ಹೊರಬಂದಿದ್ದು, ಆತನೇ ಈ ದಾಳಿ ಮಾಡಿಸಿರಬಹುದೆಂದು ಶಂಕಿಸಲಾಗಿದೆ.

Share Post