CrimeDistricts

ಮೂರು ಎಟಿಎಂಗಳಿಗೆ ಪೂಜೆ ಮಾಡಿದ ಅಪರಿಚಿತರು; ಏನಿದರ ಉದ್ದೇಶ..?

ಹಾಸನ; ನಿಧಿಗಾಗಿ ಪೂಜೆ ಪುನಸ್ಕಾರಗಳನ್ನು ಮಾಡೋದನ್ನ ನೋಡಿದ್ದೇವೆ. ಆದ್ರೆ, ಇಲ್ಲಿ ಎಟಿಎಂಗಳಿಗೆ ಪೂಜೆ ಮಾಡಲಾಗಿದೆ. ಹೌದು, ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ಮಧ್ಯ ರಾತ್ರಿ ಮೂರು ಎಟಿಎಂಗೆ ಪೂಜೆ ಮಾಡಲಾಗಿದೆ. ಅಪರಿಚಿತರು ಎಟಿಎಂಗಳಿಗೆ ಪೂಜೆ ಮಾಡಿದ್ದು, ಯಾಕೆ ಮಾಡಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಎಟಿಎಂಗಳಿಗೆ ಅರಶಿನ, ಕುಂಕುಮ ಹಚ್ಚಲಾಗಿದೆ. ಅಕ್ಷತೆಯನ್ನುಕೂಡಾ ಹಾಕಿದ್ದಾರೆ. ಜೊತೆಗೆ ಗಂಧದ ಕಡ್ಡಿ ಬೆಳಗಿದ್ದಾರೆ. ಇದು ಕಳ್ಳತನಕ್ಕೆ ಯತ್ನವೋ ಅಥವಾ ವಾಮಾಚಾರವೋ ಎಂಬ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

Share Post