DistrictsPolitics

ಅಮಿತ್‌ ಶಾ ನನ್ನ ಮನೆಯಲ್ಲಿ ಕೂತು ಜೀವ ತೆಗೆದರು; ವಿ.ಸೋಮಣ್ಣ ಬೇಸರ

ತುಮಕೂರು; ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧ ಎಂದು ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ವಿ.ಸೋಮಣ್ಣ ಅವರು, ಸಿದ್ದಲಿಂಗ ಶ್ರೀಗಳ ಎದುರೇ ಅಸಮಾಧಾನ ತೋಡಿಕೊಂಡಿದ್ದಾರೆ.

ನಾನು ಬೆಂಗಳೂರಿನ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿದ್ದೇ ತಪ್ಪಾಯ್ತು. ಅದು ನಾನು ಮಾಡಿದ ಮಹಾ ಅಪರಾಧ. ಅಮಿತ್‌ ಶಾ ಅವರು ನಮ್ಮ ಮನೆಯಲ್ಲಿ ಎರಡು ಗಂಟೆ ಕುಳಿತಿದ್ದರು. ನೀನು ಅಲ್ಲಿ ಸ್ಪರ್ಧೆ ಮಾಡಲೇಬೇಕು ಎಂದು ಜೀವ ತೆಗೆದರು. ಆದರೂ ನಾನು ಒಪ್ಪಲಿಲ್ಲ. ಕೊನೆಗೆ ಮೋದಿಯವರು ದೆಹಲಿಗೆ ಕರೆಸಿಕೊಂಡರು. ನೀನು ಸ್ಪರ್ಧೆ ಮಾಡು ಎಂದು ಮೋದಿಯವರು ಸೂಚನೆ ಕೊಟ್ಟರು. ಅವರ ಮಾತು ಕೇಳಿದ್ದಕ್ಕಾಗಿ ನಾನು ಸೋಲಬೇಕಾಯಿತು ರಂದು ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.

Share Post