CrimeDistricts

ಚಿರತೆ ದಾಳಿಗೆ ಬಲಿಯಾದ ರೈತ ಹಾಗೂ ಕರು..!

ಚಾಮರಾಜನಗರ; ಹಸು ಮೇಯಿಸಲು ಹೋಗಿದ್ದ ರೈತನನ್ನು ಚಿರತೆ ಬಲಿ ತೆಗೆದುಕೊಂಡಿದೆ. ಚಿರತೆ ದಾಳಿ ಒಂದು ಕರು ಕೂಡಾ ಜೀವ ತೆತ್ತಿದೆ. ಹನೂರು ಬಳಿ ಕೆವಿನ್‌ ದೊಡ್ಡಿದ ಗ್ರಾಮದ ಬಳಿ ಈ ಘಟನೆ ನಡೆದಿದೆ. 

ಕೆವಿನ್ ದೊಡ್ಡಿ ಗ್ರಾಮದ ಗೋವಿಂದಯ್ಯ(65) ಹಾಗೂ ಕರು ಚಿರತೆ ದಾಳಿಗೆ ತುತ್ತಾಗಿದ್ದಾರೆ.  ಚಿರತೆ ಈ ಹಿಂದೆ ಮೇಕೆಯೊಂದನ್ನು ಬಲಿ ತೆಗೆದುಕೊಂಡು ಈ ಭಾಗದ ಜನರಲ್ಲಿ ಆತಂಕವನ್ನುಂಟು ಮಾಡಿತ್ತು. ಕೂಡಲೇ ಚಿರತೆಯ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

 

Share Post