Districts

ಶಿಲ್ಪಿ ಯೋಗಿರಾಜ್ ಕೆತ್ತನೆಯ ಮತ್ತೊಂದು ರಾಮನ ಮೂರ್ತಿ ಮಂಡ್ಯದಲ್ಲಿ ಪ್ರತಿಷ್ಠಾಪನೆ

ಮಂಡ್ಯ; ಬಾಲರಾಮನ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ ಮತ್ತೊಂದು ರಾಮನ ವಿಗ್ರಹ ಇಂದೇ ಪ್ರತಿಷ್ಠಾಪನೆಯಾಗಿದೆ.

 

  ಮಂಡ್ಯದ ಲೇಬರ್ ಕಾಲೋನಿಯಲ್ಲಿ ಹೊಸದಾಗಿ ರಾಮಮಂದಿರ ಕಟ್ಟಲಾಗಿದ್ದು, ಇಂದು ಉದ್ಘಾಟನೆ ಮಾಡಲಾಗಿದೆ.

 

 ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ದೇಗುಲಕ್ಕಾಗಿ ರಾಮ, ಸೀತೆ, ಲಕ್ಷ್ಮಣ, ಹನುಮ, ಸರಸ್ವತಿ ಹಾಗೂ ಗಣಪತಿ ದೇವರ ವಿಗ್ರಹಗಳು ಕೆತ್ತನೆ ಮಾಡಿಕೊಟ್ಟಿದ್ದಾರೆ‌ ಈ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಶಿಷ್ಯ ವೃಂದದಿಂದ ಪೂಜೆ ಹಾಗೂ ವಿಧಿವಿಧಾನಗಳು ನೆರವೇರುತ್ತಿದೆ.

Share Post