Districts

ಶಾಸಕರು ವಿನಾಕಾರಣ ಓಡಾಟ; ಕೆಂಡಾಮಂಡಲರಾದ ಸ್ಪೀಕರ್‌

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಕೆಲ ಶಾಸಕರು ವಿನಾಕಾರಣ ಓಡಾಡುತ್ತಿದ್ದರು. ಆಡಳಿತ ಪಕ್ಷದ ಶಾಸಕರೇ ಸುಮ್ಮನೇ ಓಡಾಡುತ್ತಿದ್ದನ್ನು ಕಂಡ ಸ್ಫಿಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೆಂಡಾಮಂಡಲರಾದರು. ಕೂತುಕೊಳ್ಳುವಂತೆ ತಾಕೀತು ಮಾಡಿದರು.

ಬಿಜೆಪಿ ಸಚಿವರನ್ನುದ್ದೇಶಿ ಮಾತನಾಡಿದ ಸ್ಪೀಕರ್‌, ಶಾಸಕರು ಹಾಗೆ ಓಡಾಡುತ್ತಿದ್ದರೆ ನೀವೇನು ಮಾಡುತ್ತಿದ್ದೀರಿ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಸ್ಪೀಕರ್‌ ಸೂಚಿಸಿದರು. ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭಿರವಾಗಿ ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿನಾಕಾರಣ ಎದ್ದು ಓಡಾಡುವುದು ಎಷ್ಟು ಸರಿ ಎಂದು ಸ್ಫಿಕರ್‌ ಪ್ರಶ್ನೆ ಮಾಡಿದರು.

Share Post