Districts

ನಗರಸಭೆ ಚುನಾವಣೆ ಮುನ್ನವೇ ಕಾಂಗ್ರೆಸ್‌ ಅಭ್ಯರ್ಥಿ ನಿಧನ

ಶಿರಾ: ಇದೇ ತಿಂಗಳು ೨೭ ರಂದು ನಡೆಯುವ ನಗರಸಭೆ ಚುನಾವಣೆಯಲ್ಲಿ ೨೧ನೇ ವಾರ್ಡ್ ನಿಂದ  ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚಾಂದ್‌ ಪಾಷಾ ಹೃದಯಾಘಾತದಿಂದ ನಿಧನರಾದರು.
ಚಾಂದ್‌ ಪಾಷಾ ಅವರು ತುಮಕೂರಿನ ಶಿರಾ ನಗರಸಭೆ  ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಜಾಮಿಯಾ ಮಸೀದಿ ಮುತ್ವಲ್ಲಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಟರಾಜ್‌ ಬೀಡಿ ಮಾಲೀಕರಾಗಿದ್ದು, ಆರ್.‌ ರೆಹಾನ್‌ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.
ಇದೀಗ ಅವರ ನಿಧನದಿಂದ ನಗರಸಭೆ ಚುನಾವಣೆ ಬಗ್ಗೆ ಗೊಂದಲ ಸೃಷ್ಠಿಸಿದೆ. ಹೀಗಾಗಿ ಚುನಾವಣೆ ಮುಂದೂಡುತ್ತಾರಾ ಅಥವಾ ನಡೆಯುತ್ತಾ ಎಂಬುದು ಚುನಾವಣೆ ಆಯೋಗ ಸ್ಪಷ್ಟಪಡಿಸಬೇಕಿದೆ.

Share Post