CrimeDistricts

ಅಕ್ಕ ಅಕ್ಕ ಎನ್ನುತ್ತಿದ್ದವನೇ ಸುಂದರಿ ಶಿಕ್ಷಕಿಯ ಕೊಲೆ ಮಾಡಿದನಾ?

ಮಂಡ್ಯ; ಮೇಲುಕೋಟೆಯ ಶಿಕ್ಷಕಿ ಮೂರು ದಿನಗಳಿಂದ ನಾಪತ್ತೆಯಾಗಿದ್ದಳು. ಇದೀಗ ಶಿಕ್ಷಕಿಯ ಮೃತದೇಹ ಸಿಕ್ಕಿದ್ದು, ಅಕ್ಕ ಅಕ್ಕ ಎಂದು ಸ್ನೇಹ ಬೆಳೆಸಿದಾತನೇ ಈ ಕೊಲೆ ಮಾಡಿದ್ದಾನೆಂದು ಶಂಕಿಸಲಾಗಿದೆ. ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

  ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆಯಾದವರು. ಮಂಡ್ಯ ಜಿಲ್ಲೆ ಪಂಡವಪುರ ತಾಲ್ಲೂಕೊನ ಮೇಲುಕೋಟೆ ಬಳಿಯ ಮಾಣಿಕ್ಯನಹಳ್ಳಿ‌ ನಿವಾಸಿ ದೀಪಿಕಾಗೆ ಅದೇ ಗ್ರಾಮದ ನಿತೀಶ್ ಎಂಬ ಯುವಕ ಪರಿಚಯವಿದ್ದ. ಆತ ಯಾವಾಗಲೂ ದೀಪಿಕಾಳನ್ನು ಅಕ್ಕ ಅಕ್ಕ ಎಂದು ಕರೆಯುತ್ತಿದ್ದ. ಈಗ ಆತನೇ ಕೊಲೆ ಮಾಡಿದ್ದಾನೆಂದು ಶಂಕಿಸಲಾಗಿದೆ.

 

   ದೀಪಿಕಾ ನಾಪತ್ತೆಯಾಗುವುದಕ್ಕೂ ಮುನ್ನ ನಿತೀಶ್‌ಗೆ ಕೊನೇ ಬಾರಿ ಕರೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇತ್ತ ದೀಪಿಕಾ ಮೃತದೇಹ ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ನಿತೀಶ್ ನಾಪತ್ತೆಯಾಗಿದ್ದಾನೆ. ಮೇಲುಕೋಟೆ ತಪ್ಪಲಿನಲ್ಲಿ‌ ನಿತೀಶ್ ಹಾಗೂ ದೀಪಿಕಾ ಜಗಳವಾಡುತ್ತಿರುವುದನ್ನು ಕೆಲವರು ನೋಡಿದ್ದಾರೆ ಎನ್ನಲಾಗಿದೆ.

 

ಜಗಳವಾಡುತ್ತಿದ್ದ ದೃಶ್ಯವನ್ನು ಪ್ರವಾಸಿಗರು 13 ಸೆಕೆಂಡ್‌ಗಳ ರೆಕಾರ್ಡ್ ಮಾಡಿ ಪೊಲೀಸರಿಗೆ ನೀಡಿದ್ದಾರೆ. ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲೇ ದೀಪಿಕಾಳ ಡಿಯೋ ಸ್ಕೂಟರ್ ಪತ್ತೆಯಾಗಿತ್ತು. ಸ್ಕೂಟರ್ ಪತ್ತೆಯಾದ ಸ್ಥಳದ ಸುತ್ತಮುತ್ತ ಕುಟುಂಬಸ್ಥರು ದೀಪಿಕಾಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಕಣ್ಣಿಗೆ ಬಿದ್ದಿದೆ.

Share Post