CrimeHealth

ವೀರಪ್ಪನ್‌ ಸಹಚರ, ಪಾಲಾರ್‌ ಸ್ಫೋಟದ ರೂವಾರಿ ಜ್ಞಾನಪ್ರಕಾಶ್‌ ನಿಧನ!

ಮೈಸೂರು; ನರಹಂತಕ ವೀರಪ್ಪನ್‌ ಸಹಚರ ಹಾಗೂ ಪಾಲಾರ್‌ ಬಾಂಬ್‌ ಸ್ಫೋಟ ಅಪರಾಧಿ ಜ್ಞಾನಪ್ರಕಾಶ್‌ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಆತನಿಗೆ 69 ವರ್ಷ ವಯಸ್ಸಾಗಿತ್ತು. 29 ವರ್ಷಗಳಿಂದ ಜೈಲಿನಲ್ಲೇ ಇದ್ದ ಜ್ಞಾನಪ್ರಕಾಶ್‌ ಅನಾರೋಗ್ಯದ ನೆಪವೊಡ್ಡಿ 2022ರ ಡಿಸೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಗೆ ಇದ್ದಾಗಲೇ ಅನಾರೋಗ್ಯ ತೀವ್ರವಾಗಿ ಆತ ಸಾವನ್ನಪ್ಪಿದ್ದಾನೆ.

ಈತ ಹನೂರಿನ ಸಂದನಪಾಳ್ಯದಲ್ಲಿ ವಾಸವಿದ್ದ. ಅಲ್ಲೇ ಜ್ಞಾನಪ್ರಕಾಶ್‌ ಸಾವನ್ನಪ್ಪಿದ್ದಾನೆ. ಪಾಲಾರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈತನೇ ಪ್ರಮುಖನಾಗಿದ್ದ. ಹೀಗಾಗಿ ಕೋರ್ಟ್‌ ಈತನಿಗೆ 1987ರ ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ತಡೆ ಕಾಯಿದೆಯಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

 

Share Post